- +91 73497 60202
- [email protected]
- September 19, 2024 9:00 PM
ನ್ಯೂಸ್ ನಾಟೌಟ್: ಮಹಿಳೆಗೆ ಬಾಯಿ ಮುಚ್ಚಿ ಎಳೆದೊಯ್ಯಲು ಯತ್ನಿಸಿದ ವ್ಯಕ್ತಿಗೆ ಅಲ್ಲೇ ಇದ್ದ ಯುವಕರು ಗೂಸಾ ಕೊಟ್ಟಿದ್ದಾರೆ. ಕಾಮುಕನನ್ನು ನಗ್ನಗೊಳಿಸಿ ಮನಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಕಲ್ಕೆರೆ ಕಾಲೋನಿ ಬಳಿ ಘಟನೆ ನಡೆದಿದೆ. ಕುಡಿದ ನಶೆಯಲ್ಲಿದ್ದ ವ್ಯಕ್ತಿಯ ಮೇಲೆ ಹತ್ತಕ್ಕೂ ಅಧಿಕ ಯುವಕರಿಂದ ಹಲ್ಲೆ ನಡೆದಿದೆ. ಧಾರವಾಡ ಮೂಲದ ರವಿಕುಮಾರ್ ಹಲ್ಲೆಗೊಳಗಾದವನು ಎಂದು ಗುರುತಿಸಲಾಗಿದೆ. ರವಿಕುಮಾರ್ ಕಲ್ಕೆರೆ ಹೋಟೆಲ್ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಅಪರಿಚಿತ ಮಹಿಳೆಯೊಬ್ಬರು ಅಂಗಡಿಗೆ ಹಾಲು ತೆಗೆದುಕೊಂಡು ಬರಲು ಹೋಗಿದ್ದರು. ನಶೆ ಏರಿಸಿಕೊಂಡಿದ್ದ ರವಿಕುಮಾರ್, ಮಹಿಳೆಯ ಹಿಂದಿನಿಂದ ಬಂದು ಬಾಯಿ ಮುಚ್ಚಿಕೊಂಡು ಎಳೆದೊಯ್ಯಲು ಯತ್ನಿಸಿದ್ದಾನೆ.ಇದರಿಂದ ಆತಂಕಗೊಂಡ ಮಹಿಳೆ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾಳೆ. ಅಲ್ಲಿಯೇ ಇದ್ದ ಗ್ರಾಮದ ಯುವಕರು ಮಹಿಳೆ ನೆರವಿಗೆ ಧಾವಿಸಿದ್ದಾರೆ. ಎಸ್ಕೇಪ್ ಆಗಲು ಯತ್ನಿಸಿದ ರವಿಕುಮಾರ್ನನ್ನು ಹಿಡಿದು ಮನಸೋ ಇಚ್ಛೆ ಥಳಿಸಿದ್ದಾರೆ. ರವಿಕುಮಾರ್ನನ್ನು ನಗ್ನಗೊಳಿಸಿ ಮರ್ಮಾಂಗ ಮತ್ತು ವೃಷಣಕ್ಕೆ ಹೊಡೆದು ತೀವ್ರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ಮಾಡಿ ಆಟೋದಲ್ಲಿ ಕರೆದೊಯ್ಯುವ ವೇಳೆ ಪೊಲೀಸರು ಆಗಮಿಸಿದ್ದು, ರವಿಕುಮಾರ್ನನ್ನು ಬನ್ನೇರುಘಟ್ಟ ಪೊಲೀಸರ ವಶಕ್ಕೆ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ವಿಜಯಶ್ರೀ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ