‘ಉತ್ತರ ಭಾರತೀಯರು ಬೆಂಗಳೂರಿಂದ ಹೋದ್ರೆ ಎಲ್ಲ ಖಾಲಿಯಾಗಿ ಹೋಗುತ್ತದೆ’ ಎಂದಿದ್ದಾಕೆಯನ್ನು ಕೆಲಸದಿಂದ ತೆಗೆದ ಕಂಪನಿ..! ಕನ್ನಡಿಗರಲ್ಲಿ ಕ್ಷಮೆ ಕೇಳಿದ ಯುವತಿ

ನ್ಯೂಸ್ ನಾಟೌಟ್ : ಬೆಂಗಳೂರಿನಿಂದ ಉತ್ತರ ಭಾರತೀಯರು ಹೊರಟು ಹೋದರೆ ಇಡೀ ಬೆಂಗಳೂರು ಖಾಲಿಯಾಗಿ ಹೋಗುತ್ತದೆ ಎಂದು ರೀಲ್ಸ್ ಮಾಡಿದ್ದ Instagram influencer Sugandh Sharma ಮಹಿಳೆಯನ್ನು ಆಕೆಯ ಸಂಸ್ಥೆ ಕಿಕೌಟ್ ಮಾಡಿದ್ದು,ಇದೀಗ ಕನ್ನಡಿಗರ ಕ್ಷಮೆ ಕೇಳಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ‘ಹೌದು.. ನಾವಿದ್ದರೆ ಮಾತ್ರ ಬೆಂಗಳೂರು… ನಾವೆಲ್ಲರೂ ಬಿಟ್ಟು ಹೋದರೆ ಇಡೀ ಬೆಂಗಳೂರೇ ಖಾಲಿಯಾಗುತ್ತದೆ.. ಕೋರಮಂಗಲದ ಪಬ್‌ಗಳೆಲ್ಲಾ ಖಾಲಿ ಹೊಡೆಯುತ್ತವೆ’ ಎಂದಿದ್ದ ಇನ್ಸ್‌ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ ಸುಗಂಧ್‌ ಶರ್ಮಾ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಬೆಂಗಳೂರು ಮತ್ತು ಕರ್ನಾಟಕದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಸುಗಂಧ್‌ ಶರ್ಮಾ ಇದೀಗ ಬೆಂಗಳೂರನ್ನೇ ಬಿಟ್ಟು ಹೋಗುವಂತಾಗಿದೆ. ಮೂಲಗಳ ಪ್ರಕಾರ ಫ್ರೀಡಂ ಕಂಪನಿಯಲ್ಲಿ ಸುಗಂಧ ಶರ್ಮ ಕೆಲಸ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸುಗಂಧ್‌ ಶರ್ಮಾ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಸಹ ಎಚ್ಚೆತ್ತುಕೊಂಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆಕೆಯನ್ನು ಕಂಪನಿ ಕೆಲಸದಿಂದ ತೆಗೆದುಹಾಕಿದೆ. ಈಗ ಸುಗಂಧ್ ಶರ್ಮಾ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ನನ್ನ ಬೆಂಗಳೂರು ರೀಲ್ಸ್ ವಿಡಿಯೋಗಳಿಂದ ಯಾರ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಭಾರತದ ಪ್ರತೀಯೊಂದು ರಾಜ್ಯ, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತೇನೆ. ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ. Click