- +91 73497 60202
- [email protected]
- September 29, 2024 8:58 AM
ನ್ಯೂಸ್ ನಾಟೌಟ್: ಕೇರಳದ ನ್ಯಾಯಾಧೀಶರೊಬ್ಬರು ಮರಣ ಪೂರ್ವ ವರದಿ ದಾಖಲಿಸಲು ಸುಳ್ಯಕ್ಕೆ ಬಂದಾಗ ನ್ಯಾಯಾಧೀಶರ ಜೊತೆಗೆ ಸುಳ್ಯದ ವೈದ್ಯೆಯೊಬ್ಬರು ಉದ್ದಟತನದಿಂದ ವರ್ತಿಸಿದ್ದಾರೆ ಎನ್ನುವ ದೂರು ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೇರಳದ ಸೆಕೆಂಡ್ ಜೆಎಂಎಫ್ ಸಿ ನ್ಯಾಯಾಧೀಶರು ಸುಳ್ಯ ಸಮೀಪದ ಕೇರಳದ ಆದೂರಿನಲ್ಲಿ ನಡೆದಂತಹ ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಯತ್ನಕ್ಕೆ ಸಂಬಂಧಪಟ್ಟಂತೆ ಸುಳ್ಯ ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆಯ ವರದಿ ಪಡೆಯೋಕೆ ಬರುತ್ತಾರೆ. ಮರಣ ಪೂರ್ವ ವರದಿಯನ್ನು ಪಡೆಯುವ ಸಂದರ್ಭದಲ್ಲಿ ವೈದ್ಯೆಯೊಬ್ಬರು ಉದ್ದಟತನದಿಂದ ವರ್ತಿಸಿದ್ದಾರೆ ಎನ್ನಲಾಗಿದೆ. ಇದರಿಂದ ತೀವ್ರ ಅಸಮಾಧಾನಗೊಂಡ ನ್ಯಾಯಾಧೀಶರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ