- +91 73497 60202
- [email protected]
- September 19, 2024 5:16 AM
ನ್ಯೂಸ್ ನಾಟೌಟ್: ಗಣೇಶ್ ಹಬ್ಬದ ನಿಮಿತ್ತ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ನಾಲ್ಕು ಅಡಿ ಎತ್ತರದ ಗಣೇಶನ ಮೂರ್ತಿಯನ್ನು ಜೈಲಿನಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಕಾರಾಗೃಹದ ಸಿಬ್ಬಂದಿ ಗಣೇಶನ ಮೂರ್ತಿಯನ್ನು ಟ್ರ್ಯಾಕ್ಟರ್ ಮೂಲಕ ತಂದರು. ಮೂರ್ತಿ ಪ್ರತಿಷ್ಠಪನೆಗಾಗಿ ಜೈಲು ಸಿಬ್ಬಂದಿ ಗಣೇಶ ಮಂಟಪ ಅಲಂಕಾರ ಮಾಡಲಾಗಿದ್ದು, ಸಾಮೂಹಿಕವಾಗಿ ಜೈಲಿನ ಕೈದಿಗಳು ಇರೋ ಸ್ಥಳದಲ್ಲಿ ಮೂರ್ತಿಯನ್ನು ಇರಿಸಲಾಗಿದೆ. ಪ್ರತಿ ವರ್ಷ ಎಲ್ಲ ಕೈದಿಗಳು ಸೇರಿ ಅದ್ದೂರಿಯಾಗಿ ಅಲಂಕಾರ ಮಾಡಿ ಹಬ್ಬ ಮಾಡುತ್ತಿದ್ದರು, ಆದರೆ, ನಟ ದರ್ಶನ್ ಇರುವ ಹಿನ್ನೆಲೆ ಯಾವುದೇ ಭದ್ರತಾ ಲೋಪವಾಗದಂತೆ ಸರಳವಾಗಿ ಆಚರಣೆ ಮಾಡಲು ಜೈಲಾಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ