ಸಿಎಂ ಕುಳಿತಿದ್ದ ವೇದಿಕೆಗೆ ಏಕಾಏಕಿ ನುಗ್ಗಿದ ಯುವಕ..! ವಿಧಾನಸೌಧ ಆವರಣದಲ್ಲೇ ಭದ್ರತಾ ವೈಫಲ್ಯ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ವಿಧಾನಸೌಧದ ಮುಂದೆಯೇ ಭದ್ರತಾ ವೈಫಲ್ಯ ನಡೆದಿರುವ ಘಟನೆ ಸಿಎಂ ಕಾರ್ಯಕ್ರಮದಲ್ಲಿ ಇಂದು(ಸೆ.15) ನಡೆದಿದೆ. ವಿಧಾನಸೌಧದ ಎದುರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಏಕಾಏಕಿ ಯುವ ಜಂಪ್‌ ಮಾಡಿ ವೇದಿಕೆಗೆ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸೇರಿ ವೇದಿಕೆ ಮೇಲಿದ್ದ ಗಣ್ಯರು ತಬ್ಬಿಬ್ಬಾಗಿದ್ದರು. ಕೂಡಲೇ ಸಿಎಂ ಅಂಗರಕ್ಷಕರು ಯುವಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಯುವಕನನ್ನು ವಶಕ್ಕೆ ಪಡೆದರೂ ಆತನ ಸಿಎಂ ಕಡೆಗೆ ಶಾಲು ಎಸೆದು ಅಲ್ಲಿಂದ ಹೋಗಿದ್ದಾನೆ. ವಿಧಾನಸೌಧದ ಆವರಣದಲ್ಲೇ ಘಟನೆ ನಡೆದಿದ್ದು, ಸಿಎಂ ಕಾರ್ಯಕ್ರಮದಲ್ಲೇ ಭದ್ರತಾ ಲೋಪ ಘಟನೆ ನಡೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.ವೇದಿಕೆ ಆಗಮಿಸಿದ ಯುವಕ ಯಾರು? ಯಾಕೆ ವೇದಿಕೆ ಬಂದ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕ ಕರ್ನಾಟಕದ ಭಾವುಟದ ಬಣ್ಣ ಇರುವ ಟಾವೆಲ್​ ಹೆಗಲ ಮೇಲೆ ಹಾಕಿಕೊಂಡಿರುವುದು ದೃಶ್ಯಗಳಲ್ಲಿ ಕಂಡು ಬಂದಿದೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಬೆಂಗಳೂರಿನಲ್ಲಿ ರೋಡ್​ ಶೋ ಮಾಡುವ ವೇಳೆ ತೆರೆದ ವಾಹನದ ಮೇಲೆ ಹತ್ತಿ ಸಿಎಂ ಅವರಿಗೆ ಹೂವಿನ ಹಾರ ಯತ್ನಿಸಿದ್ದರು. ಆದರೆ ಈ ವೇಳೆ ಆತನ ಸೊಂಟದಲ್ಲಿ ಗನ್ ಕಂಡು ಬಂದಿತ್ತು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. Click