ರಕ್ಷಾ ಬಂಧನಕ್ಕೆ ತವರಿಗೆ ಹೋಗಲು ಹಠ ಹಿಡಿದ ಪತ್ನಿ..! ಗಂಡ-ಹೆಂಡತಿ ಜಗಳದಲ್ಲಿ ಹೆಂಡತಿಯ ಮೂಗನ್ನೇ ಕಚ್ಚಿ ತುಂಡರಿಸಿದ ಗಂಡ..! ಮುಂದೇನಾಯ್ತು..?

ನ್ಯೂಸ್‌ ನಾಟೌಟ್‌: ರಕ್ಷಾಬಂಧನದ ವಿಚಾರವಾಗಿ ಆರಂಭವಾದ ಜಗಳ ಕಡೆಗೆ ಘೋರ ಕೃತ್ಯಕ್ಕೆ ಕಾರಣವಾಗಿದೆ. ರಕ್ಷಾ ಬಂಧನದಂದು ತವರು ಮನೆಗೆ ಹೋಗಬೇಕೆಂದು ಹಠ ಹಿಡಿದ ವಿವಾಹಿತ ಮಹಿಳೆ ತನ್ನ ಪತಿಯೊಂದಿಗೆ ಜಗಳವಾಡಿದ್ದಾಳೆ. ಜಗಳಕ್ಕೆ ಕೋಪಗೊಂಡ ಪತಿ ಪತ್ನಿಯ ಮೂಗನ್ನೇ ಕಚ್ಚಿದ್ದಾನೆ. ಇನ್ನು ತಕ್ಷಣ ಆಕೆಯನ್ನು ಲಕ್ನೋ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಗಿದೆ. ದೇಹತ್ ಕೊತ್ವಾಲಿ ಪ್ರದೇಶದ ಬನಿಯಾನಿಪುರ್ವಾ ನಿವಾಸಿ ಅನಿತಾ (ವಯಸ್ಸು 27) ಎಂಬವರು ಭಾನುವಾರ ಪತಿ ರಾಹುಲ್​​ಗೆ ಪೋಷಕರ ಮನೆಗೆ ಹೋಗುವಂತೆ ಒತ್ತಾಯಿಸುತ್ತಿದ್ದಳು. ಸದ್ಯ ನಿನ್ನನ್ನು ಮನೆಗೆ ಕಳುಹಿಸುವ ಪರಿಸ್ಥಿತಿ ಇಲ್ಲ ಎಂದು ಗಂಡ ಹೇಳುತ್ತಿದ್ದ. ಆದರೆ ಪತ್ನಿ ರಕ್ಷಾ ಬಂಧನ ನೆಪದಲ್ಲಿ ಪತಿಯೊಂದಿಗೆ ಜಗಳವಾಡಿದ್ದಾಳೆ. ಪತ್ನಿಯ ವಾದದಿಂದ ಕೋಪಗೊಂಡ ರಾಹುಲ್ ಅನಿತಾ ಅವರ ಮೂಗನ್ನೇ ಕಚ್ಚಿಬಿಟ್ಟಿದ್ದಾನೆ. ಆ ಬಳಿಕ ಅನಿತಾ ಸ್ಥಿತಿ ಹದಗೆಟ್ಟಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಮನೆಯಲ್ಲಿದ್ದ ಇತರರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅನಿತಾ ಕೆಲ ದಿನಗಳ ಹಿಂದೆಯಷ್ಟೇ ಮಾವನ ಮನೆಗೆ ವಾಪಸ್ಸಾಗಿದ್ದರು. ಭಾನುವಾರ ಮತ್ತೆ ತವರು ಮನೆಗೆ ಹೋಗುವುದಾಗಿ ಹಠ ಹಿಡಿದ ಘಟನೆಯಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. Click