- +91 73497 60202
- [email protected]
- October 7, 2024 1:54 AM
ಕೊಳ್ಳೇಗಾಲದಿಂದ ಬರುತ್ತಿರುವಾಗ ಏಕಾಏಕಿ ಸಿಡಿದ KSRTC ಬಸ್ ನ ಟಯರ್..! ಪವಾಡವೆಂಬಂತೆ ಪಾರಾದ ಪ್ರಯಾಣಿಕರು..!
ನ್ಯೂಸ್ ನಾಟೌಟ್ : ಕೆ.ಎಸ್.ಆರ್.ಟಿ.ಸಿ ಬಸ್ಸಿನ ಟೈರ್ ಸಿಡಿದು 20ಕ್ಕೂ ಹೆಚ್ಚು ಪ್ರಯಾಣಿಕರು ಚಾಲಕನ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರದ ಘಟನೆ ಹನೂರು ತಾಲೂಕಿನ ಅಜ್ಜೀಪುರ ಬಳಿ ಮಂಗಳವಾರ(ಆ.28) ತಡರಾತ್ರಿ ನಡೆದಿದೆ. ಕೊಳ್ಳೇಗಾಲದಿಂದ ದಂಟಲ್ಲಿ ಗ್ರಾಮದ ಕಡೆಗೆ ಹೋಗುವ ಬಸ್ ರಾಮಪುರ ಕೌದಳ್ಳಿ ಮಾರ್ಗವಾಗಿ ಸಂಚರಿಸುವ ವೇಳೆ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.KSRTC ಬಸ್ಸಿನ ಟಯರುಗಳು ತೀವ್ರ ಕಳಪೆ ಮಟ್ಟದ್ದಾಗಿದ್ದು, ವಾಹನಗಳು ತಳ್ಳುಗಾಡಿಗಳಂತೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತವೆ. ಈ ರೀತಿ ವಾಹನಗಳು ಕೆಟ್ಟ ನಿಲ್ಲುವ ಮೂಲಕ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಂಬಂಧಪಟ್ಟ ಕರ್ನಾಟಕ ರಾಜ್ಯ ಸಾರಿಗೆ ಹಿರಿಯ ಅಧಿಕಾರಿಗಳು ಸಾರಿಗೆ ವಾಹನಗಳನ್ನು ಬದಲಾವಣೆ ಮಾಡಿ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ