ಯುವಕನ ಮರ್ಮಾಂಗ ಕತ್ತರಿಸಿ ಬಿಕ್ಷೆ ಬೇಡಿಸಿದ ಮಂಗಳಮುಖಿಯರು..! ಆತ ನೀಡಿದ ದೂರಿನಲ್ಲಿದೆ ಭಯಾನಕ ಮಾಹಿತಿ..!

ನ್ಯೂಸ್ ನಾಟೌಟ್: ಯುವಕನೊಬ್ಬನನ್ನು ಮಂಗಳಮುಖಿಯಾಗಿ ಪರಿವರ್ತಿಸಲು ಇಂಜೆಕ್ಷನ್‌ ನೀಡಿ ಪ್ರಜ್ಞೆ ತಪ್ಪಿಸಿ ಆತನ ಮರ್ಮಾಂಗವನ್ನು ಕತ್ತರಿಸಿದ ಆರೋಪದಡಿ 5 ಮಂದಿ ಮಂಗಳಮುಖಿಯರ ವಿರುದ್ಧ ಬೆಂಗಳೂರಿನ ಪುಲಕೇಶಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.ಜೆ.ಹಳ್ಳಿ ನಿವಾಸಿ 18 ವರ್ಷದ ಯುವಕ ನೀಡಿದ ದೂರಿನ ಮೇರೆಗೆ ಮಂಗಳಮುಖಿಯರಾದ ಚಿತ್ರಾ, ಪ್ರೀತಿ, ಕಾಜಲ್‌,ಅಶ್ವಿ‌ನಿ, ಮುಗಿಲ ಎಂಬುವರ ವಿರುದ್ಧ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಡಿ.ಜೆ.ಹಳ್ಳಿಯಲ್ಲಿ ವಾಸವಾಗಿದ್ದ ಯುವಕ ಅಂಬೇಡ್ಕರ್‌ ಕಾಲೇಜು ಸಮೀಪದ ಟೀ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅಂಗಡಿಗೆ ಬರುತ್ತಿದ್ದ ಮಂಗಳಮುಖಿಯರು ಯುವಕನಿಗೆ ತಮ್ಮೊಂದಿಗೆ ಬಂದರೆ, ಒಳ್ಳೆಯ ಮನೆಗೆ ಸೇರಿಸುತ್ತೇವೆ. ಆಗ ಒಳ್ಳೆಯ ಸಂಪಾದನೆ ಮಾಡಬಹುದು ಎಂದು ಆಸೆ ತೋರಿಸಿದ್ದಾರೆ. ಆರಂಭದಲ್ಲಿ ಯುವಕ ಆರೋಪಿಗಳ ಜತೆ ಹೋಗಲು ನಿರಾಕರಿಸಿದ್ದಾನೆ. ನಂತರ ಯುವಕನಿಗೆ ಬೆದರಿಸಿದ ಆರೋಪಿಗಳು, ಟ್ಯಾನರಿ ರಸ್ತೆಯಲ್ಲಿರುವ ತಮ್ಮ ಮನೆಗೆ ಕರೆದೊಯ್ದು ಕೆಲ ದಿನಗಳ ಕಾಲ ಗೃಹ ಬಂಧನದಲ್ಲಿ ಇರಿಸಿದ್ದರು. ಜತೆಗೆ ಆತನ ಮನೆಯವರನ್ನು ಹತ್ಯೆ ಮಾಡುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡಿ, ಆತನಿಂದ ಭಿಕ್ಷಾಟನೆ ಮಾಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೀಗೆ 3 ವರ್ಷಗಳ ಕಾಲ ಭಿಕ್ಷಾಟನೆ ಮಾಡಿದ ಯುವಕ ಆರೋಪಿಗಳಿಗೆ ಪ್ರತಿದಿನ 2 ಸಾವಿರ ರೂ. ತಂದು ಕೊಟ್ಟಿದ್ದಾನೆ. ಇನ್ನೂ ಹೆಚ್ಚು ಸಂಪಾದಿಸಬೇಕು, ನೀನು ಈಗ ಗಂಡು ಆಗಿರುವಾಗಲೇ ದಿನಕ್ಕೆ 2 ಸಾವಿರ ದುಡಿಯುತ್ತಿದ್ದೀಯಾ, ಇನ್ನು ಹೆಣ್ಣಾದರೆ ಹೆಚ್ಚು ಸಂಪಾದಿಸಬಹುದು ಎಂದು ಲಿಂಗ ಪರಿವರ್ತನೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಯುವಕ ಒಪ್ಪದಿದ್ದಾಗ ಆತನನ್ನು ಹಿಂಸಿಸಿ ಅಮಲು ಬರುವ ಇಂಜೆಕ್ಷನ್‌ ಕೊಟ್ಟು ಯುವಕನ ಮರ್ಮಾಂಗಕ್ಕೆ ಹಾನಿ ಮಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಯುವಕನಿಗೆ ಎಚ್ಚರವಾದಾಗ ಆತನ ಮರ್ಮಾಂಗ ಕತ್ತರಿಸಿ, ಪೈಪ್‌ ಅಳವಡಿಸಿರುವುದು ಕಂಡು ಬಂದಿದೆ. ಬಳಿಕ ಮನೆಯಲ್ಲಿ ಪೂಜೆ ಮಾಡಿಸಿ “ಲೈಂಗಿಕ ಕಾರ್ಯಕರ್ತಳಾಗಿ ಕೆಲಸ ಮಾಡು’ ಎಂದು ಪೀಡಿಸಿದ್ದಾರೆ.ಅಲ್ಲದೆ, 5 ಲಕ್ಷ ರೂ. ತಂದುಕೊಡು ಎಂದು ಬೆದರಿಸಿದ್ದಾರೆ ಎನ್ನಲಾಗಿದೆ. ಅದರಿಂದ ಹೆದರಿದ ಯುವಕ ಅವರಿಂದ ತಪ್ಪಿಸಿಕೊಂಡು ಬಂದು ಐವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ ಎಂದು ವರದಿ ತಿಳಿಸಿದೆ. Click