ದರ್ಶನ್ ನ ವಿಚಾರಣಾಧೀನ ಕೈದಿ ಸಂಖ್ಯೆ ಬದಲಾವಣೆ..! ಹಚ್ಚೆ ಹಾಕಿಸಿಕೊಂಡವರೆಲ್ಲಾ ಕಂಗಾಲು..! ಶೀಘ್ರದಲ್ಲೇ ದರ್ಶನ್ ಬಳ್ಳಾರಿಗೆ ಶಿಫ್ಟ್..!

ನ್ಯೂಸ್ ನಾಟೌಟ್: ಕೊಲೆ ಆರೋಪಿ ನಟ ದರ್ಶನ್​​ ನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್​ ಮಾಡಲು ನಿರ್ಧರಿಸಲಾಗಿದೆ. ಬಳ್ಳಾರಿಗೆ ಶಿಫ್ಟ್​ ಆಗುತ್ತಿದ್ದಂತೆ ವಿಚಾರಣಾಧೀನ ಕೈದಿ ಸಂಖ್ಯೆ ಬದಲಾವಣೆ ಮಾಡಲಿದ್ದಾರೆ. ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ವಿಚಾರಣಾಧೀನ ಕೈದಿ ನಂ. 6106 ನೀಡಲಾಗಿತ್ತು. ಇದನ್ನು ಫ್ಯಾನ್ಸ್ ಸಂಭ್ರಮಿಸಿ ಹಚ್ಚೆ ಹಾಕಿಸಿಕೊಂಡಿದ್ದರು. ಕೆಲವರು ಕಾರುಗಳಿಗೆ ಈ ಸಂಖ್ಯೆಯನ್ನು ಬರೆದುಕೊಂಡಿದ್ದರು. ಈಗ ದರ್ಶನ್ ಫ್ಯಾನ್ಸ್ ಮತ್ತೆ ಪೇಚಿಗೆ ಸಿಲುಕಿಕೊಂಡಿದ್ದಾರೆ.ಫ್ಯಾನ್ಸ್ ದರ್ಶನ್ ​ನ ಮೇಲೆ ಅಂಧಾಭಿಮಾನ ತೋರಿಸುತ್ತಿದ್ದಾರೆ. ಈ ಕಾರಣದಿಂದಲೇ ದರ್ಶನ್ ಜೊತೆ ಅನೇಕರು ಅರೆಸ್ಟ್ ಆಗಿದ್ದಾರೆ. ದರ್ಶನ್ ನ ಕೈದಿ ಸಂಖ್ಯೆಯನ್ನು ಕೆಲವರು ಹಚ್ಚೆ ಹಾಕಿಸಿಕೊಂಡರೆ ಇನ್ನೂ ಕೆಲವರು ತಮ್ಮ ವಾಹನಗಳಿಗೆ ಈ ನಂಬರ್​ನ ಸ್ಟಿಕ್ಕರ್ ಅಂಟಿಸಿದರು. ಅತ್ತ ಮಗನಿಗೆ ಕೈದಿ ಡ್ರೆಸ್ ಹಾಕಿಸಿ ಫೋಟೋಶೂಟ್ ಮಾಡಿಸೋ ಕೆಲಸವೂ ಆಯಿತು. ಈಗ ದರ್ಶನ್ ಫ್ಯಾನ್ಸ್ ಆರೋಪಿ ದರ್ಶನ್ ವಿಚಾರಣಾಧೀನ ಕೈದಿ ಸಂಖ್ಯೆ ಬದಲಾವಣೆ ಪಕ್ಕಾ ಆಗಿದೆ. ಬಳ್ಳಾರಿಗೆ ಶಿಫ್ಟ್​ ಆಗುತ್ತಿದ್ದಂತೆ ವಿಚಾರಣಾಧೀನ ಕೈದಿ ಸಂಖ್ಯೆ ಚೇಂಜ್ ಆಗಲಿದೆ. ಬಳ್ಳಾರಿ ಕೈದಿಗಳಂತೆ ನಟ ದರ್ಶನ್‌ಗೂ ವಿಚಾರಣಾಧೀನ ಕೈದಿ ಸಂಖ್ಯೆ ಸಿಗಲಿದೆ. ಮೂರು ಅಂಕಿಯ ವಿಚಾರಣಾಧೀನ ನಂಬರ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೈಲಿನಲ್ಲಿ ಸಿಗರೇಟ್ ಸೇದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರನ್ನು ಇಂದು (ಆಗಸ್ಟ್​ 28) ವಿಚಾರಣೆ ಮಾಡಬೇಕಿದೆ. ಆ ಬಳಿಕ ಸ್ಥಳ ಮಹಜರು ನಡೆಯಲಿದೆ. ಇದಾದ ಬಳಿಕ ದರ್ಶನ್ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ. Click