ಅಡಿಕೆ ತೋಟಗಳಿಗೆ ನುಗ್ಗಿದ ನೇತ್ರಾವತಿ ನದಿ ನೀರು..! 6 ಕುಟುಂಬಗಳ ಸ್ಥಳಾಂತರ..!

ನ್ಯೂಸ್ ನಾಟೌಟ್: ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಏರುತ್ತಲೇ ಇದ್ದು, ಬಂಟ್ವಾಳದಲ್ಲಿ ನೀರಿನ ಮಟ್ಟ 7.8 ಮೀ.ಗೆ ತಲುಪಿದ ಹಿನ್ನೆಲೆ ಪಾಣೆಮಂಗಳೂರಿನ ಆಲಡ್ಕದ 6 ಕುಟುಂಬಗಳನ್ನು ತಾಲೂಕು ಆಡಳಿತ ಸ್ಥಳಾಂತರ ಮಾಡಿದೆ ಎಂದು ವರದಿ ತಿಳಿಸಿದೆ. ನೇತ್ರಾವತಿ ನದಿ ಪಾತ್ರದ ಗ್ರಾಮಗಳಲ್ಲಿ ಕೃಷಿ ತೋಟಗಳು ಜಲಾವೃತಗೊಂಡಿವೆ ಎನ್ನಲಾಗಿದೆ. ನಿನ್ನೆ(ಜು.18) ಸಂಜೆಯಿಂದ ನೀರಿನ ಮಟ್ಟ ಏರುತ್ತಲೇ ಇದೆ. ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ಸರಪಾಡಿ, ಬರಿಮಾರು, ಮಣಿನಾಲ್ಕೂರು,ಉಪ್ಪಿನಂಗಡಿಯ ಕೆಲವೊಂದು ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. Click 👇 https://newsnotout.com/2024/07/uppinangady-ksrtc-iravata-fire-kannada-news-ac-problem/