- +91 73497 60202
- [email protected]
- September 20, 2024 2:38 AM
ಕೆ.ಎಸ್.ಆರ್.ಟಿ.ಸಿ(KSRTC) ಯಿಂದ ಊಟ, ತಿಂಡಿ ಸಹಿತ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ..! ಇಲ್ಲಿದೆ ಸಂಪೂರ್ಣ ಮಾಹಿತಿ
ನ್ಯೂಸ್ ನಾಟೌಟ್: ಮಳೆ ಜೋರಾಗಿರುವುದರಿಂದ ಜೋಗ ಜಲಪಾತ ಭೋರ್ಗರೆಯುತ್ತ ಧುಮ್ಮುಕ್ಕುತ್ತಿದೆ. ಮುಂಗಾರಿನ ವೇಳೆ ಜಲಪಾತವನ್ನು ನೋಡ ಬಯಸಿದರೆ ನಿಮಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ಊಟ, ತಿಂಡಿ ಸಹಿತವಾಗಿ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ಬೆಂಗಳೂರಿನಿಂದ ವಾರಾಂತ್ಯ ಶುಕ್ರವಾರ (ಜು.19) ಮತ್ತು ಶನಿವಾರ (ಜು.20) ಎರಡು ದಿನವು ಕೆಎಸ್ಆರ್ಟಿಸಿಯ ನಾನ್ ಎಸಿ ಸ್ಲೀಪರ್ ಬಸ್ಗಳು ಪ್ರವಾಸಿಗರನ್ನು ಕರೆದುಕೊಂಡು ಹೋಗಿ, ಮರಳಿ ಕರೆತರುತ್ತವೆ. ಒಬ್ಬರಿಗೆ 3 ಸಾವಿರ ರೂ. ( 6 ರಿಂದ 12 ವರ್ಷದವರಿಗೆ 2,800 ರೂ.) ದರ ನಿಗದಿ ಮಾಡಿದೆ. ರಾತ್ರಿ 10:30 ವರೆಗೆ ಬೆಂಗಳೂರಿನಿಂದ ಹೊರಡುವ ಬಸ್ ನಸುಕಿನ ಜಾವ 5:30ಕ್ಕೆ ಸಾಗರ ತಲುಪಲಿದೆ. ನಂತರ ಹೋಟೆಲ್ನಲ್ಲಿ ಫ್ರೆಶ್ ಅಪ್ ಹಾಗೂ ವಿಶ್ರಾಂತಿಗೆ ಬೆಳಗ್ಗೆ 7 ಗಂಟೆವರೆಗೆ ಸಮಯವಿರುತ್ತದೆ. ಬಳಿಕ ಬೆಳಗ್ಗೆ 7:15ಕ್ಕೆ ಉಪಹಾರ ತಿಂದು ಅಲ್ಲಿಂದ 7:30ಕ್ಕೆ ವರದಹಳ್ಳಿ ತಲುಪಲಿದೆ. ನಂತರ ಅರ್ಧ ಗಂಟೆಯ ಆಸು ಪಾಸಿನಲ್ಲಿ ವರದಮೂಲದಿಂದ ಇಕ್ಕೇರಿ, ಕೆಳದಿ, ಸಾಗರಕ್ಕೆ ಬಸ್ ಬರಲಿದೆ ಎಂದು ಮಾಹಿತಿ ನೀಡಲಾಗಿದೆ. ಸಾಗರದಲ್ಲಿ 1:15 ಕ್ಕೆ ಮಧ್ಯಾಹ್ನದ ಊಟ ಮುಗಿಸಿಕೊಂಡು ಮಧ್ಯಾಹ್ನ 2 ಗಂಟೆಗೆ ಜೋಗ ತಲುಪಲಿದೆ. ಸಾಯಂಕಾಲ 5:15ಕ್ಕೆ ಸುಮಾರಿಗೆ ಜೋಗದಿಂದ ಹೊರಟು 6 ಗಂಟೆ ಹೊತ್ತಿಗೆ ಸಾಗರ ತಲುಪಲಿದೆ. ಸಾಗರದಲ್ಲಿ ಒಂದು ಗಂಟೆ ಕಾಲ ಶಾಪಿಂಗ್ ಮಾಡಿ, ರಾತ್ರಿ ಊಟ ಅಲ್ಲಿಯೇ ಮುಗಿಸಿಕೊಂಡು, 11 ಗಂಟೆಗೆ ಬಸ್ ಸಾಗರದಿಂದ ಹೊರಟು ನಸುಕಿನ ಜಾವ 5ಕ್ಕೆ ಬೆಂಗಳೂರು ತಲುಪಲಿದೆ ಎಂದು ಟೈಮ್ ಟೇಬಲ್ ನೀಡಲಾಗಿದೆ. ಇದರೊಂದಿಗೆ ಕೆಎಸ್ಆರ್ಟಿಸಿ ಬೆಂಗಳೂರಿನಿಂದ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಜಲಪಾತಕ್ಕೂ ಟೂರ್ ಪ್ಯಾಕೇಜ್ ಘೋಷಿಸಿದೆ. ಒಬ್ಬರಿಗೆ 500 ರೂ. (6 ರಿಂದ 12 ವರ್ಷದವರಿಗೆ 350 ರೂ.) ನಿಗದಿ ಮಾಡಿದೆ ಎನ್ನಲಾಗಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ