ದರ್ಶನ್ ನನ್ನು​ ನೋಡಲು ರಾಯಚೂರಿನಿಂದ ಬಂದು ಜೈಲಿನೆದುರು ಕಣ್ಣೀರಿಟ್ಟ ಅಭಿಮಾನಿಗಳು..! ನಾಳೆಯಾದ್ರೂ ‘ಡಿ ಬಾಸ್’ ಅನ್ನು ನೋಡಿಯೇ ಊರಿಗೆ ಮರಳೋದು ಎಂದ ಫ್ಯಾನ್ಸ್..!

ನ್ಯೂಸ್‌ ನಾಟೌಟ್‌: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಜೈಲು ಸೇರಿದ್ದು, ವಿಚಾರಣಾಧೀನ ಕೈದಿಯಾಗಿ 14 ದಿನಗಳ ನ್ಯಾಯಾಂಗ ಬಂಧನ ನೀಡಲಾಗಿದೆ. ಪರಪ್ಪನ ಅಗ್ರಹಾರಕ್ಕೆ ಅವರನ್ನು ನೋಡಬೇಕು ಎಂದು ಕೆಲವು ಅಭಿಮಾನಿಗಳು ಜೈಲಿನ ಬಳಿ ಬಂದಿದ್ದಾರೆ. ದೂರದ ರಾಯಚೂರು ಜಿಲ್ಲೆಯಿಂದ ಬಂದಿರುವ ಫ್ಯಾನ್ಸ್​ ಅಧಿಕಾರಿಗಳು ಅನುಮತಿ ನಿರಾಕರಿಸಿದ ಕಾರಣ ಕಣ್ಣೀರು ಹಾಕುತ್ತಾ ಜೈಲಿನ ಹೊರಗೆ ನಿಂತಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಬೇಕು ಎಂದು ಅಭಿಮಾನಿಗಳು ಹಠ ಹಿಡಿದಿದ್ದಾರೆ. ದೂರದ ಊರುಗಳಿಂದ ಬಂದಿರುವ ದರ್ಶನ್​ ಅಭಿಮಾನಿಗಳು ತಮ್ಮ ಎದೆಯ ಮೇಲೆ ದರ್ಶನ್ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ‘ನಮ್ಮ ಬಾಸ್ ಕೆಟ್ಟದ್ದು ಮಾಡಿರಬಹುದು. ಆದರೆ ಅವರು ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಆದರೂ ಮಾಧ್ಯಮಗಳಲ್ಲಿ ಕೆಟ್ಟದಾಗಿ ತೋರಿಸಲಾಗುತ್ತಿದೆ’ ಎಂದು ದರ್ಶನ್​ ಅಭಿಮಾನಿಗಳು ಹೇಳುತ್ತಿದ್ದಾರೆ. ‘ಇಂದು ರಜೆ ಹಿನ್ನೆಲೆಯಲ್ಲಿ ಬಾಸ್ ಭೇಟಿಗೆ ಅವಕಾಶ ನೀಡುತ್ತಿಲ್ಲ. ನಾವು ನಾಳೆ ಬಾಸ್ ಭೇಟಿ ಮಾಡಿಯೇ ವಾಪಸ್ ಹೊರಡೋದು’ ಎಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ದರ್ಶನ್ ಅಭಿಮಾನಿಗಳ ಹೇಳುತ್ತಿದ್ದಾರೆ. Click 👇