Darshan Murder Mystery: ‘ದರ್ಶನ್ ಗಿಂತ ನನ್ನದೇನು ಕಡಿಮೆ ಇಲ್ಲ ಬಾ’ ಅಂತ ಪವಿತ್ರಾ ಗೌಡಗೆ ಮೆಸೇಜ್ ಕಳುಹಿಸಿದ್ದ ರೇಣುಕಾ ಸ್ವಾಮಿ..!, ಗುಪ್ತಾಂಗದ ಫೋಟೋ ಕಳುಹಿಸಿದ್ದಕ್ಕೆ ರೊಚ್ಚಿಗೆದ್ದಿದ್ದ ನಟ ದರ್ಶನ್

ನ್ಯೂಸ್ ನಾಟೌಟ್: ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಡಿಬಾಸ್ ದರ್ಶನ್ ಈಗ ಕತ್ತೆತ್ತಿ ಓಡಾಡುವಂತಿಲ್ಲ. ಇಡೀ ರಾಜ್ಯದ ಅಭಿಮಾನಿಗಳ ಪ್ರೀತಿಗೆ ಪಾತ್ರನಾಗಿದ್ದ ಡಿಬಾಸ್ ಈಗ ಪಶ್ಚಾತಾಪದ ಬೇಗೆಯಲ್ಲಿ ಬೇಯುವಂತಾಗಿದೆ. ದರ್ಶನ್ ಈ ಕೊಲೆಯನ್ನು ಯಾಕೆ ಮಾಡಿದರು ಅನ್ನುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ಈ ಹಲ್ಲೆಯನ್ನು ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಆ ಮೆಸೇಜ್ ಯಾವುದು..? ದರ್ಶನ್ ಅಷ್ಟೊಂದು ಕೆರಳುವುದಕ್ಕೆ ಕಾರಣವೇನು..? ಆ ಸಂದೇಶದಲ್ಲಿ ಅಂಥಹುದ್ದು ಏನಿದೆ..? ಅನ್ನುವುದರ ಬಗೆಗಿನ ವಿಚಾರವನ್ನು ನೋಡುವುದಾದರೆ ಹಲವಾರು ಅಂಶಗಳು ಬಯಲಿಗೆ ಬಂದಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಳೆದ ಫೆಬ್ರವರಿಯಿಂದ ಪವಿತ್ರಾ ಗೌಡ ಸಾಮಾಜಿಕ ಜಾಲತಾಣದ ಖಾತೆಯ ಹಿಂದೆ ಬಿದ್ದಿದ್ದಾನೆ. ದರ್ಶನ್ ಹಾಗೂ ಅವರ ಪತ್ನಿ ವಿಜಯ ಲಕ್ಷ್ಮೀ ನಡುವಿನ ಸಾಂಸಾರಿಕ ಜೀವನದಲ್ಲಿ ಪವಿತ್ರಾ ಗೌಡ ಬಂದಿರುವ ಬಗ್ಗೆ ರೇಣುಕಾ ಸ್ವಾಮಿ ಸಿಟ್ಟಿಗೆದ್ದಿದ್ದ. ನೆಚ್ಚಿನ ನಟನ ಸಾಂಸಾರಿಕ ಜೀವನ ಸರಿ ಆಗಬೇಕು ಎಂದು ಬಯಸಿದ್ದ. ಈ ಹಿನ್ನೆಲೆಯಲ್ಲಿ ಪವಿತ್ರಾ ಗೌಡಗೆ ಆಕ್ರೋಶದಿಂದ ಇನ್ಸ್ಟಾ ಗ್ರಾಮ್ ನಲ್ಲಿ ಮೇಲಿಂದ ಮೇಲೆ ಕೆಟ್ಟದಾಗಿ ಬೈದು ಮೆಸೇಜ್ ಕಳುಹಿಸುತ್ತಿದ್ದ. ಇತ್ತ ಈ ಮೆಸೇಜ್ ಗಳನ್ನು ಓದಿ ಪವಿತ್ರಾ ಗೌಡ ಆತನ ಅಕೌಂಟ್ ಅನ್ನೇ ಬ್ಲಾಕ್ ಮಾಡಿದ್ದಳು. ಆದರೆ ರೇಣುಕಾ ಸ್ವಾಮಿ ಮತ್ತೊಂದು ಅಕೌಂಟ್ ತೆರೆದು ವಾರಗಳ ಹಿಂದೆ ಗುಪ್ತಾಂಗದ ಫೋಟೋ ಕಳುಹಿಸಿ ‘ದರ್ಶನ್ ಗಿಂತ ನನ್ನದೇನು ಕಡಿಮೆ ಇಲ್ಲ ಬಾ ಅಂತ’ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದ. ಇದನ್ನು ನೋಡಿದ ಪವಿತ್ರಾ ಗೌಡ ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದಳು. ಮನೆ ಕೆಲಸದವನ ಜೊತೆ ತನ್ನ ನೋವನ್ನು ತೋಡಿಕೊಂಡಿದ್ದಳು. ದರ್ಶನ್ ಜೊತೆ ಈ ವಿಚಾರವನ್ನು ಹೇಳಬೇಡ, ಆತ ಅವನನ್ನು ಜೀವಂತವಾಗಿ ಇಡುವುದಿಲ್ಲ ಎಂದು ಕೆಲಸದವನಿಗೆ ಹೇಳಿದ್ದಳು. ಆದರೆ ಮನೆ ಕೆಲಸದವನ ಬಾಯಿ ಸುಮ್ಮನಿರಲಿಲ್ಲ. ದರ್ಶನ್ ಬರುತ್ತಿದ್ದಂತೆ ‘ಅಣ್ಣಾ ಹಿಂಗೆಲ್ಲ ಆಗಿದೆ’ ಅಂತ ಊದಿ ಬಿಟ್ಟಿದ್ದಾನೆ, ಇದರಿಂದ ಕೆರಳಿದ ದರ್ಶನ್ ಅಕ್ಷರಶಃ ರಾಕ್ಷಸನಾಗುತ್ತಾನೆ. ಪವಿತ್ರಾಳಿಗೆ ಅಶ್ಲೀಲ ಮೆಸೇಜ್ ಮಾಡಿದ ಸಂಕಟ ತಡೆಯಲಾರದೆ ಆತನನ್ನು ಕಿಡ್ನ್ಯಾಪ್ ಮಾಡಿಸುತ್ತಾನೆ. ಸಹಚರರ ಮೂಲಕ ಆತನನ್ನು ಗೋಡಾನ್ ವೊಂದಕ್ಕೆ ತರಲಾಗುತ್ತದೆ. ಅಲ್ಲಿ ರೇಣುಕಾಸ್ವಾಮಿಗೆ ಮನಬಂದಂತೆ ಥಳಿಸಲಾಗಿತ್ತು. ಗುಪ್ತಾಂಗದ ಮೇಲೆ ಒದೆಯಲಾಗಿತ್ತು. ಪವಿತ್ರಾ ಅವರು ಚಪ್ಪಲ್ಲಿಯಲ್ಲಿ ರೇಣುಕಾಸ್ವಾಮಿಗೆ ಹೊಡೆದಿದ್ದರು. ಇನ್ನೊಂದ್ ಸಲ ಈ ರೀತಿಯ ಮೆಸೇಜ್ ಬಂದ್ರೆ ಗತಿ ಕಾಣಿಸ್ತೀನಿ ಅಂತಾ ದರ್ಶನ್ ಆವಾಜ್ ಹಾಕಿದ್ದರು. ಹಲ್ಲೆ ಮಾಡಿದ ಬಳಿಕ ಊಟ ಮತ್ತು ಟ್ಯಾಬ್ಲೆಟ್ ಕೊಡಿಸಿ ಎಂದು ದರ್ಶನ್ ಹೇಳಿದ್ದರು. ಆ ಬಳಿಕ ದರ್ಶನ್ ಶಿಷ್ಯರಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಪವನ್, ರಘು, ಕಾರ್ತಿಕ್ ಸೇರಿದಂತೆ ಹಲವರಿಂದ ಹಲ್ಲೆ ನಡೆದಿದೆ. ಈ ವೇಳೆ ರೇಣುಕಾ ಸ್ವಾಮಿ ಮೃತಪಟ್ಟಿದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಿದೆ.