ದರ್ಶನ್ ಆ್ಯಂಡ್ ಟೀಮ್ ನಿಂದ ನಿರಂತರ ರೌಡಿಗಳ ಸಂಪರ್ಕ..! ಹಲವು ದಂಧೆಗಳಲ್ಲಿ ದಾಸನಿಗೆ ರೌಡಿಗಳಿಂದ ಸಹಾಯ..?

ನ್ಯೂಸ್‌ ನಾಟೌಟ್ : ರೇಣುಕಾ ಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ತನಿಖೆಯ ಒಟ್ಟಿಗೆ ದರ್ಶನ್ ಮತ್ತು ಟೀಮ್ ಹಲವು ಬಗೆಯ ದಂಧೆಗಳಲ್ಲಿ ಭಾಗಿಯಾಗಿದ್ದರು, ಆ ದಂಧೆಗಳನ್ನು ಹಲವು ರೌಡಿಗಳ ಸಂಪರ್ಕದಿಂದ ನಿರ್ವಹಿಸುತ್ತಿದ್ದರು ಎಂಬ ವಿಷಯವು ಬೆಳಕಿಗೆ ಬಂದಿದೆ. ರೌಡಿಗಳಿಗೆ ಹಣ ನೀಡಿ ಸಹಚರರ ಬಡ್ಡಿದಂದೆಗೆ ಸಹಾಯ ಮಾಡುತ್ತಿದ್ದರು ಮತ್ತು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ಧವಾಗಿ ಪೋಸ್ಟ್ ಮಾಡಿದವರ ಮೇಲೆಯೂ ಈ ರೌಡಿಗಳು ಕಣ್ಣಿಡುತ್ತಿದ್ದರು ಎನ್ನಲಾಗಿದೆ. ಇದರ ಜೊತೆಗೆ ಇನ್ನಿತರ ರಹಸ್ಯ ಕಾರ್ಯಾಚರಣೆಗಳು ಈ ರೌಡಿಗಳ ಮೂಲಕ ನಡೆಸುತ್ತಿದ್ದರು ಮತ್ತು ಅವರ ಜೊತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದ ವಿಚಾರ ಬಯಲಾಗಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್, ಆತನ ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿದೆ. ಇದೀಗ ಹಾಸ್ಯನಟ ಚಿಕ್ಕಣ್ಣನಿಗೂ ತನಿಖೆ ಉರುಳು ಬಿದ್ದಿದೆ. (Chikkanna issue with Darshan case) ಹೈಪ್ರೊಫೈಲ್ ಕೇಸ್ ಆಗಿರುವುದರಿಂದ ಸಹಜವಾಗಿಯೇ ಚರ್ಚೆಯನ್ನು ಹುಟ್ಟು ಹಾಕಿದೆ. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸ ಹೆಸರುಗಳು ಕೂಡ ಕೇಳಿ ಬಂದಿದೆ. Click 👇