Madikeri love story: ಮಡಿಕೇರಿ:ಪ್ರಿಯಕರನನ್ನು ಮನೆಗೆ ಕರೆಸಿ ಬಿಸಿ ನೀರು ಎರಚಿದ ಯುವತಿ ಮನೆಯವರು..! ಸಾಧಿಕ್ ಸ್ಥಿತಿ ಗಂಭೀರ..!

ನ್ಯೂಸ್ ನಾಟೌಟ್: ಪ್ರೀತಿಸಿದ ಯುವಕನ‌ ಮೇಲೆ ಯುವತಿಯ ಕುಟುಂಬಸ್ಥರು ಬಿಸಿ ನೀರು ಎರಚಿರುವ ಅಮಾನವೀಯ ಘಟನೆ ಮಡಿಕೇರಿಯ ಮದೆನಾಡಿನಲ್ಲಿ ಮಂಗಳವಾರ(ಮೇ.21) ವರದಿಯಾಗಿದೆ. ಸುಹೇಲ್ (27) ಎಂಬ ಯುವಕನ ಮೇಲೆ ಬಿಸಿ ನೀರು ಎರಚಲಾಗಿದ್ದು ಯುವಕನ ಮುಖ, ಗುತ್ತಿಗೆ ಭಾಗಗಳಿಗೆ ಗಂಭೀರವಾಗಿ ಸುಟ್ಟುಹೋಗಿವೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ‌ ಸುಹೇಲ್​ನನ್ನು ಮಡಿಕೇರಿ ಕೊಯಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ಗಣಪತಿ ಬೀದಿ‌ ನಿವಾಸಿ ಸುಹೇಲ್ ಮದೆನಾಡಿನ ಜೀನತ್ ಎಂಬಾಕೆಯನ್ನ ಪ್ರೀತಿಸುತ್ತಿದ್ದ. ಜೀನತ್ ತನ್ನ ಪ್ರಿಯಕರನಿಗೆ ಕರೆ ಮಾಡಿ ನನಗೆ ಮನೆಯಲ್ಲಿ ತುಂಬಾ ಹಿಂಸೆಯಾಗುತ್ತಿದೆ. ಮನೆಯಲ್ಲಿರಲು ಆಗುತ್ತಿಲ್ಲ ಎಂದು ಹೇಳಿದ್ದಳು. ಹೀಗಾಗಿ ತನ್ನ ಪ್ರೇಯಸಿಯನ್ನು ಕರೆತರಲು ಆತ ಮನೆಗೆ ಹೋಗಿದ್ದಾಗ ಜೀನತ್ ತಂದೆ ಸಾಧಿಕ್ ಯುವಕನ ಜೊತೆ ಜಗಳ ಮಾಡಿದ್ದಾರೆ. ಈ ವೇಳೆ ಸುಹೇಲ್ ಮೇಲೆ ಬಿಸಿ ನೀರು ಎರಚಿದ್ದಾರೆ ಎಂದು ವರದಿ ತಿಳಿಸಿದೆ. Click 👇