- +91 73497 60202
- [email protected]
- July 9, 2024 12:07 AM
ನ್ಯೂಸ್ ನಾಟೌಟ್: ನದಿಯಲ್ಲಿ ಮುಳುಗುತ್ತಿದ್ದ ಏಳು ವರ್ಷದ ಬಾಲಕನನ್ನು ಸ್ಥಳೀಯರು ರಕ್ಷಣೆ ನದಿಗೆ ಹಾರಿ ರಕ್ಷಿಸಿದ ರೋಚಕ ಮಾನವೀಯ ಘಟನೆ ಕಾಶ್ಮೀರದ ಜೇಲಂ ನದಿಯಲ್ಲಿ ನಡೆದಿದೆ. ಭಾನುವಾರ ಈ ಘಟನೆ ಶ್ರೀನಗರದ ಸಫಾದ್ಕಲ್ ಎಂಬಲ್ಲಿ ನಡೆದಿದೆ. ಸ್ಥಳೀಯರಾದ ಝಹೂರ್ ಅಹ್ಮದ್ ಮತ್ತು ಶೌಕತ್ ಅಹ್ಮದ್ ನದಿಗೆ ಧುಮುಕಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ವಿಡಿಯೋದಲ್ಲಿ ಬಾಲಕ ನದಿಯಲ್ಲಿ ಕೊಚ್ಚಿ ಹೋಗುತ್ತಿರೋದು ಕಾಣಿಸುತ್ತದೆ, ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದ್ದರೂ ಒಂದು ಕ್ಷಣವೂ ಯೋಚಿಸದ ಝಹೂರ್ ಅಹ್ಮದ್ ಮತ್ತು ಶೌಕತ್ ಅಹ್ಮದ್ ನದಿಗೆ ಜಿಗಿದು ಕ್ಷಣಾರ್ಧದಲ್ಲಿ ಬಾಲಕನನ್ನು ತಲುಪಿ, ನದಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ದಡಕ್ಕೆ ತಂದಾಗ ಮಗು ಸಂಪೂರ್ಣ ಪ್ರಜ್ಞೆಯನ್ನು ಕಳೆದುಕೊಂಡಿತ್ತು. ಮಗುವನ್ನು ಪ್ರಥಮ ಚಿಕಿತ್ಸೆ ಮಾಡಿ, ತಕ್ಷಣ ದಾಖಲಿಸಲಾಗಿದೆ. ಬಾಲಕ ಚೇತರಿಸಿಕೊಂಡಿದ್ದಾನೆ ಎನ್ನಲಾಗಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ