ಪ್ರಜ್ವಲ್‌ ಬೆಂಗಳೂರಿನಲ್ಲಿ ಬಂಧನವಾಗುತ್ತಿದ್ದಂತೆ ಬೆಂಗಳೂರು ಬಿಟ್ಟು ತೆರಳಿದ ಹೆಚ್.ಡಿ.ಕೆ..! ಕುಟುಂಬ ಸಮೇತ ರೆಸಾರ್ಟ್‌ಗೆ ಶಿಫ್ಟ್..!

ನ್ಯೂಸ್‌ ನಾಟೌಟ್‌: ಸಂಸದ ಪ್ರಜ್ವಲ್‌ ರೇವಣ್ಣ ಬೆಂಗಳೂರಿನತ್ತ ಆಗಮಿಸಿ ಅರೆಸ್ಟ್ ಆಗುತ್ತಿದ್ದಂತೆ ಅತ್ತ ಮಾಜಿ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬೆಂಗಳೂರಿನ ಮನೆ ಬಿಟ್ಟು ಕುಟುಂಬ ಸಮೇತ ಕಬಿನಿ ಹಿನ್ನೀರಿನಲ್ಲಿರುವ ರೆಸಾರ್ಟ್‌ಗೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ. ಪ್ರಜ್ವಲ್ ಬರುತ್ತಿರುವುದು ಖಾತರಿಯಾಗುತ್ತಿದ್ದಂತೆ ಗುರುವಾರ(ಮೇ.29) ಮಧ್ಯಾಹ್ನ ಕುಟುಂಬ ಸಮೇತ ಜೆ.ಪಿ. ನಗರ ನಿವಾಸದಿಂದ ಹೊರಟ ಕುಮಾರಸ್ವಾಮಿ ಹೋಗಿರುವುದಾಗಿ ವರದಿ ತಿಳಿಸಿದೆ. ದಿನನಿತ್ಯವೂ ಹೇಳಿಕೆ-ಪ್ರತಿಹೇಳಿಕೆ ಗಳಿಂದ ಬೇಸತ್ತಿದ್ದ ಕುಮಾರಸ್ವಾಮಿ, ಎಲ್ಲಿದ್ದರೂ ಬಂದು ಎಸ್‌ಐಟಿ ತನಿಖೆ ಎದುರಿಸುವಂತೆ ಪ್ರಜ್ವಲ್‌ಗೆ ಕರೆ ಕೊಟ್ಟಿ ದ್ದರು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಕೂಡ ಎಚ್ಚರಿಕೆ ಪತ್ರ ಬರೆದಿದ್ದರು. ಅತ್ತ ಪ್ರಜ್ವಲ್‌ ವಿಮಾನ ಏರಿದ್ದು ಖಚಿತವಾಗುತ್ತಿದ್ದಂತೆ ಕುಮಾರಸ್ವಾಮಿ ಕುಟುಂಬ ಸಮೇತ ರೆಸಾರ್ಟ್‌ಗೆ ತೆರಳಿದ್ದಾರೆ. ಜತೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖೀಲ್‌ ಕುಮಾರಸ್ವಾಮಿ, ಸೊಸೆ ರೇವತಿ ಹಾಗೂ ಮೊಮ್ಮಗ ಅವ್ಯಾನ್‌ ದೇವ್‌ ಕೂಡ ಕುಮಾರಸ್ವಾಮಿ ಜತೆಗಿದ್ದಾರೆ ಎನ್ನಲಾಗಿದೆ. ಜೆ.ಪಿ. ನಗರ ನಿವಾಸದಿಂದ ಹೊರಟಾಗ ಕೇರಳದ ವಯನಾಡಿನಲ್ಲಿರುವ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಹರಡಿತ್ತು. ಈಗ ಎಚ್.ಡಿ.ಕೋಟೆಯ ಕಬಿನಿ ಹಿನ್ನೀರಿನಲ್ಲಿರುವ ರೆಸಾರ್ಟ್‌ಗೆ ತೆರಳಿದ್ದಾರೆ ಎನ್ನಲಾಗಿದೆ. Click 👇