ಬಸ್‌ ನಿಲ್ದಾಣದಲ್ಲಿ ಬಸವಣ್ಣ ಫೋಟೋ ತೆಗೆದು ಕ್ರೈಸ್ತನ ಫೋಟೋ ಹಾಕುವಂತೆ ಗಲಾಟೆ..! ಬಸವಕಲ್ಯಾಣ ಅಲ್ಲ, ಕ್ರೈಸ್ತ ಕಲ್ಯಾಣ ಮಾಡುತ್ತೇವೆ ಎಂದು ವಾದ..!

ನ್ಯೂಸ್ ನಾಟೌಟ್: ಬಸ್ ನಿಲ್ದಾಣದಲ್ಲಿ ಬಸವಣ್ಣನ ಪೋಟೊ ತೆಗೆದು ಕ್ರೈಸ್ತನ ಪೋಟೋ ಹಾಕುವಂತೆ ಕ್ರಿಶ್ಚಿಯನ್ ಅನುಯಾಯಿ ಒಬ್ಬ ಕಿರಿಕ್ ಗಲಾಟೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ಬಸ್ ನಿಲ್ದಾಣದಲ್ಲಿ ನಡೆದಿದೆ. ವಿಶ್ವಗುರು ಬಸವಣ್ಣನಿಗೆ ಅವಹೇಳನಕಾರಿಯಾಗಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ಮಾಡಿದ್ದಾನೆ ಎನ್ನಲಾಗಿದೆ. ಕ್ರೈಸ್ತ ಧರ್ಮದವರಿಗೆ ಅನ್ಯಾಯವಾಗಿದೆ. ಪಾರ್ಸಿಯಾಲಿಟಿ ಮಾಡ್ತೀರಿ ನೀವು. ಬಸವಣ್ಣನ ಪೋಟೊ ಯಾಕೆ ಹಾಕಿದ್ದೀರಾ? ಎಲ್ಲಾ ಬಸ್‌ಗಳಲ್ಲಿ ಜೀಸಸ್ ಪೋಟೊ ಹಾಕಬೇಕು ಎಂದು ಕಿರಿಕ್ ಮಾಡಿದ್ದಾನೆ ಎನ್ನಲಾಗಿದೆ. ಬಸವಕಲ್ಯಾಣ ತೆಗೆದು ಎಲ್ಲಾ ಬಸ್ಸುಗಳ ಮೇಲೆ ಕ್ರೈಸ್ತ ಕಲ್ಯಾಣ ಅಂತಾ ಮಾಡುತ್ತೇನೆ. ಕ್ರೈಸ್ತ ಮೊದಲು ಬಂದಿದ್ದಾನೆ. ಬಸವಣ್ಣ ಆ ಮೇಲೆ ಬಂದಿದ್ದಾನೆ ಎಂದು ಸಿಬ್ಬಂದಿ ಮೇಲೆ ರೇಗಾಡಿದ್ದಾನೆ ಎಂದು ವರದಿ ತಿಳಿಸಿದೆ. Click 👇