ಅಂಜಲಿ ಹತ್ಯೆ ಆರೋಪಿ ಅರೆಸ್ಟ್ ..! ಆತನ ಕುಕೃತ್ಯ ನೋಡಲಾಗದೆ ಮನೆಬಿಟ್ಟು ದೂರದ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿರುವ ತಾಯಿ..!

ನ್ಯೂಸ್ ನಾಟೌಟ್: ನೇಹಾ ಹತ್ಯೆ ಮಾದರಿಯಲ್ಲಿ ನಡೆದಿದ್ದ ಅಂಜಲಿ ಕೊಲೆ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ದಾರವಾಡದಲ್ಲಿ ಗುರುವಾರ(ಮೇ.17) ರಾತ್ರಿ ಬಂಧಿಸಿದ್ದಾರೆ. ಆರೋಪಿ ವಿಶ್ವ ಎಂದು ಖಚಿತಪಡಿಸಿದ್ದು, ಆತನ ಹಲವು ಕುಕೃತ್ಯಗಳು ಬೆಳಕಿಗೆ ಬರುತ್ತಿವೆ. ಮದ್ಯ ವ್ಯಸನಕ್ಕೆ ಬಲಿಯಾಗಿದ್ದ ಈತ ಹಲವು ಬಾರಿ ಕಳ್ಳತನ ಮಾಡಿ ಸಿಕ್ಕಿಕೊಂಡಿದ್ದ ಎಂದು ತಿಳಿದು ಬಂದಿದೆ. ಗಂಡನನ್ನು ಕಳೆದು ಕೊಂಡಿರುವ ಆರೋಪಿಯ ತಾಯಿ ಸವಿತಾ, ಆತನ ಅಪರಾಧಗಳನ್ನು ನೋಡಲಾಗದೇ ದೂರದಲ್ಲಿದ್ದು ಹೊಟ್ಟೆಪಾಡಿಗೆ ಹೋಟೆಲ್‍ನಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಇದೀಗ ಮಗನ ದುಷ್ಕೃತ್ಯಕ್ಕೆ ವಿಶ್ವನ ಮನೆಗೆ ಬೀಗ ಹಾಕಲಾಗಿದೆ. ಮತ್ತೊಂದು ಕಡೆ ಅವರನ್ನು ಮನೆ ಖಾಲಿ ಮಾಡುವಂತೆ ಮನೆಯ ಮಾಲೀಕರು ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಆರೋಪಿ ವಿಶ್ವ ಯಾವಾಗಲಾದರೂ ಒಮ್ಮೆ ತಾಯಿಯನ್ನು ನೋಡಲು ಮನೆಗೆ ಬರುತ್ತಿದ್ದ. ಆಗೆಲ್ಲ ಆತನ ಬಗ್ಗೆ ವಿವಿಧ ಆರೋಪಗಳನ್ನು ಮಾಡುತ್ತಿದ್ದ ಜನ, ಆತನ ತಾಯಿಯ ಮುಖ ನೋಡಿ ಸುಮ್ಮನಾಗುತ್ತಿದ್ದರು. ಇದೀಗ ಆರೋಪಿಯ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದ್ದು, ನೇಹಾ ಪ್ರಕರಣದಲ್ಲಿ ಆರೋಪಿಯನ್ನು ಎನ್‍ಕೌಂಟರ್ ಮಾಡಿದ್ರೆ, ಅಂಜಲಿ ಹತ್ಯೆ ನಡೆಯುತ್ತಿರಲಿಲ್ಲ. ಈಗ ವಿಶ್ವನನ್ನು ಎನ್‍ಕೌಂಟರ್ ಮಾಡಬೇಕು ಆಗ್ರಹ ಹೆಚ್ಚಾಗಿದೆ. Click 👇