ನ್ಯೂಸ್ ನಾಟೌಟ್: ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಬರುವುದಕ್ಕೆ ಹಾಗೂ ಮಂಗಳೂರಿನಿಂದ ಚೆನ್ನೈ ಸೇರಿದಂತೆ ವಿವಿಧ ಕಡೆ ಪ್ರಯಾಣ ನಡೆಸಲಿದೆ.
ಸರ್ ಎಂವಿಶ್ವೇಶ್ವರಯ್ಯ (ಎಸ್ಎಂವಿಬಿ) ಬೆಂಗಳೂರು-ಮಂಗಳೂರು ಸೆಂಟ್ರಲ್ ವಿಶೇಷ ರೈಲು ಬೆಂಗಳೂರಿನಿಂದ ಎ. 25ರ ಸಂಜೆ 6 ಗಂಟೆಗೆ ಹೊರಡಲಿದೆ. ಮರುದಿನ ಬೆಳಗ್ಗೆ 10ಕ್ಕೆ ಮಂಗಳೂರು ಸೆಂಟ್ರಲ್ ತಲಪುತ್ತದೆ. ಮರುಪ್ರಯಾಣದಲ್ಲಿ ನಂ. 06554 ಮಂಗಳೂರು ಸೆಂಟ್ರಲ್ನಿಂದ 26ರ ಮಧ್ಯಾಹ್ನ 12ಕ್ಕೆ ಹೊರಟು ಮರುದಿನ ಮುಂಜಾನೆ 3ಕ್ಕೆ ಬೆಂಗಳೂರು ತಲಪುತ್ತದೆ. ಈ ರೈಲುಗಳು ಕೊಯಂಬತ್ತೂರು, ಶೋರ್ನೂರು ಜಂಕ್ಷನ್, ಈರೋಡ್ , ಸೇಲಂ ಕಡೆ ಪ್ರಯಾಣ ನಡೆಸಲಿದೆ. ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ನಡೆಸುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ.