ನ್ಯೂಸ್ ನಾಟೌಟ್ : ಜನವಸತಿ ಪ್ರದೇಶಗಳಲ್ಲಿ ಚಿರತೆ ಮತ್ತು ಕರಡಿ ರಾತ್ರಿ ಹೊತ್ತು ಮನೆಯ ಛಾವಣಿ ಮೇಲೆ ಓಡಾಟ ನಡೆಸುತ್ತಿರುವ ಘಟನೆ ತಮಿಳುನಾಡಿನ ಊಟಿಯಲ್ಲಿ ನಡೆದಿದೆ.
ಈ ಘಟನೆಯ ಬಗ್ಗೆ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ . ಊಟಿಯ ಯಲ್ಲನಳ್ಳಿ ಕೈಕಟ್ಟಿ ಗ್ರಾಮದ ಮನೆಯೊಂದರ ಛಾವಣಿಯ ಮೇಲೆ ಚಿರತೆ ಓಡಾಟ ನಡೆಸಿದೆ. ಚಿರತೆ ಹೋದ ಸ್ವಲ್ಪ ಹೊತ್ತಿನ ನಂತರ ಅದೇ ಮನೆಯ ಛಾವಣಿಯ ಮೇಲೆ ಕರಡಿ ತಿರುಗಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಂಡಿದೆ.
ಇನ್ನು ಈ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು. ವನ್ಯಜೀವಿಗಳು ಹಾಗೂ ಇಂತಹ ಅಪಾಯಕಾರಿ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.