ನ್ಯೂಸ್ ನಾಟೌಟ್: ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರತಿನಿಧಿಸಿದ ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಪ್ರಚಂಡ ಸಾಧನೆ ಮಾಡಿದ್ದಾರೆ. ಎರಡು ಪ್ರಥಮ ಸ್ಥಾನ, ದ್ವಿತೀಯ, ಚತುರ್ಥ ಪಂಚಮ ಸ್ಥಾನದೊಂದಿಗೆ ಗ್ರಾಮೀಣ ವಿದ್ಯಾರ್ಥಿಗಳು ಮಿಂಚಿದ್ದಾರೆ.
ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ (ರಿ.) ಶಿವಮೊಗ್ಗ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಸಹಯೋಗದೊಂದಿಗೆ ಕರ್ನಾಟಕ ರತ್ನ ಡಾ | ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ 6ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯು ವಾಸವಿ ಪಬ್ಲಿಕ್ ಶಾಲೆ ಕೋಟೆ ರಸ್ತೆ ಶಿವಮೊಗ್ಗ ದಲ್ಲಿ ಫೆ.25 ಭಾನುವಾರ ನಡೆಯಿತು. 7 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಶೈನಿ ಕೊರಂಬಡ್ಕ ದ್ವಿತೀಯ ಸ್ಥಾನ, 8 ರಿಂದ 10 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಮಣಿಪ್ರಕಾಶ್ ಕಡೋಡಿ ಪ್ರಥಮ ಸ್ಥಾನ, 8 ರಿಂದ 10 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಜಿಶಾ ಕೊರಂಬಡ್ಕ ಪ್ರಥಮ ಸ್ಥಾನ ಸ್ಥಾನ ಮತ್ತು ಗೌರಿತಾ. ಕೆ. ಜಿ ಚತುರ್ಥ ಸ್ಥಾನ, ನಿಹಾನಿ ವಾಲ್ತಾಜೆ ೫ನೇ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳಿಗೆ ಶರತ್ ಮರ್ಗಿಲಡ್ಕ ತರಬೇತಿ ನೀಡಿದ್ದಾರೆ.