ನ್ಯೂಸ್ ನಾಟೌಟ್ : ಜೇನು ನೊಣಗಳು ತಾವಾಗಿಯೇ ಯಾರ ತಂಟೆಗೂ ಹೋಗಲ್ಲ. ಆದರೆ ಅದರ ತಂಟೆಗೆ ಹೋದ್ರೆ ಅವುಗಳು ಯಾರನ್ನೂ ಸುಮ್ಮನೆ ಬಿಡಲ್ಲ.ಅದು ಉದ್ದೇಶಪೂರ್ವಕವಾದರೂ ಅಷ್ಟೇ, ತಪ್ಪಿ ಮಾಡಿದ್ರೂ ಅಷ್ಟೇ .. ಶಿಕ್ಷೆಯಂತು ಗ್ಯಾರಂಟಿ..!ಹೌದು, ಇಂತಹ ಅಪರೂಪದ ಘಟನೆಯೊಂದು ಮಂಗಳೂರಿನ ಉಳ್ಳಾಲದಿಂದ ವರದಿಯಾಗಿದೆ.ಉಳ್ಳಾಲದ ಒಂಭತ್ತುಕೆರೆ ಸಮೀಪ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟದ ವೇಳೆ ಬ್ಯಾಟ್ಸ್ ಮೆನ್ ಒಬ್ಬ ಹೊಡೆದ ಚೆಂಡು ಮರದಲ್ಲಿದ್ದ ಜೇನಿನಗೂಡಿಗೆ ಬಿದ್ದ ಪರಿಣಾಮ ಆಟಗಾರರ ಮೇಲೆ ಜೇನುನೊಣಗಳು ದಾಳಿ ನಡೆಸಿದ ಘಟನೆ ನಡೆದಿದೆ.ಇದರಿಂದಾಗಿ ಕ್ರಿಕೆಟ್ ಗ್ರೌಂಡಿನಿಂದ ಎಲ್ಲರೂ ಓಟಕ್ಕಿತ್ತ ದೃಶ್ಯ ಎಲ್ಲೆಡೆ ವೈರಲಾಗಿದೆ.
ಸೋಮೇಶ್ವರ ಒಂಭತ್ತುಕೆರೆಯ ಅನಿಲ ಕಂಪೌಂಡ್ ಎಂಬಲ್ಲಿ ಸ್ಥಳೀಯರೇ ಆಯೋಜಿಸಿದ ಕ್ರಿಕೆಟ್ ಪಂದ್ಯಾಟ ಭಾನುವಾರ ನಡೆಯುತಿತ್ತು.ಈ ಸಂದರ್ಭ ಬ್ಯಾಟ್ಸ್ ಮೆನ್ ಓರ್ವರು ಹೊಡೆದ ಬಾಲ್ ತೆಂಗಿನಮರದಲ್ಲಿದ್ದ ಜೇನಿನ ಗೂಡಿಗೆ ಹೋಗಿ ಬಡಿದಿದೆ.ಗೂಡು ಒಡೆದ ಪರಿಣಾಮ ಜೇನು ನೊಣಗಳು ಬ್ಯಾಟ್ ಮೆನ್ ಸಮೇತ ಆಟಗಾರರ ಮೇಲೆ ದಾಳಿ ನಡೆಸಲಾರಂಭಿಸಿವೆ. ದಾಳಿಯಿಂದ ತಪ್ಪಿಸಲು ಕ್ರೀಡಾಂಗಣದಲ್ಲಿದ್ದ ಎಲ್ಲರೂ ಎದ್ನೋ ಬೊದ್ನೋ ಎಂದು ಓಡಲು ಶುರು ಮಾಡಿದ್ದಾರೆ.ಇದರಿಂದಾಗಿ ಪಂದ್ಯಾಟವೇ ರದ್ದಾಗುವಂತಾಗಿದೆ.