ಮಂಡಲ ಬರೆದು, ಕೊರಳಲ್ಲಿ ಮೆಣಸಿನಕಾಯಿ, ಲಿಂಬೆಹಣ್ಣು ಕಟ್ಟಿಕೊಂಡು ಆತ್ಮಹತ್ಯೆ..! ಏನಿದು ವಿಚಿತ್ರ ಘಟನೆ?

ನ್ಯೂಸ್ ನಾಟೌಟ್: ಕಂಬಳಿ ಮೇಲೆ ಅಕ್ಕಿಯಿಂದ ಮಂಡಲ ಹಾಕಿ, ಕೊರಳಲ್ಲಿ ಮೆಣಸಿನಕಾಯಿ ಹಾಗೂ ಲಿಂಬೆಹಣ್ಣು ಕಟ್ಟಿಕೊಂಡು ವಿಚಿತ್ರ ರೀತಿಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯಲ್ಲಿ ವರದಿಯಾಗಿದೆ. ಜ.6ರಂದು ಘಟನೆ ನಡೆದಿದ್ದು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತನನ್ನು ಅಡಿವೆಪ್ಪ (43) (Adiveppa) ಎಂದು ಗುರುತಿಸಲಾಗಿದೆ. ಕಂಬಳಿ ಮೇಲೆ ಅಕ್ಕಿಯಿಂದ ಮಂಡಲ ಹಾಕಿ, ಕೊರಳಲ್ಲಿ ಮೆಣಸಿನಕಾಯಿ ಹಾಗೂ ಲಿಂಬೆಹಣ್ಣು ಕಟ್ಟಿಕೊಂಡು ವಿಚಿತ್ರ ರೀತಿಯಲ್ಲಿ ಅಡಿವೆಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಪಿತ್ರಾರ್ಜಿತವಾಗಿ ಬಂದಿದ್ದ 35 ಎಕರೆಗೂ ಆಧಿಕ ಜಮೀನು ಮಾರಾಟ ಮಾಡಿದ್ದ. ಮಧ್ಯ ಸೇವನೆ ಹಾಗೂ ಇತರೆ ಚಟಗಳ ದಾಸನಾಗಿದ್ದ ಈತ, ಆಸ್ತಿ ಮಾರಾಟ ಮಾಡಿದ ಬಳಿಕ ಮಾನಸಿಕವಾಗಿ ಆಘಾತಗೊಂಡಿದ್ದನಂತೆ. ಈ ಹಿನ್ನಲೆ ತನ್ನ ಎರಡೂ ಕೈಗಳಲ್ಲಿ ಕೆಂಪು ಬಟ್ಟೆಯಲ್ಲಿ ನಿಂಬೆ ಹಣ್ಣು ಕಟ್ಟಿಕೊಂಡು, ಕೆಳಗಡೆ ಕಂಬಳಿಯ ಮೇಲೆ ಅಕ್ಕಿ ಮಂಡಳ ಹಾಕಿ ಇಂದು ಮುಂಜಾನೆ ಬೇವಿನ ಮರಕ್ಕೆ ನೇಣು ಹಾಕಿಕೊಂಡು ವಿಚಿತ್ರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ತನಿಖೆ ನಡೆಯುತ್ತಿದೆ.