ನ್ಯೂಸ್ ನಾಟೌಟ್: ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆಂದು ಬ್ಯಾನರ್ ಹಾಕಲೆಂದು ಹೋದವರು ವಿದ್ಯುತ್ ಶಾಕ್ ತಗುಲಿ ಯಮನ ಪಾದ ಸೇರಿದ್ದ ಘಟನೆ ಬಗ್ಗೆ ವರದಿಯಾಗಿತ್ತು.ಈ ದುರಂತದಲ್ಲಿ ಮೂವರು ದುರಂತ ಅಂತ್ಯ ಕಂಡಿದ್ದರು.ಬಳಿಕ ಯಶ್ ಅವರು ಅಭಿಮಾನಿಗಳಲ್ಲಿ ವಿನಂತಿಯನ್ನೂ ಮಾಡಿಕೊಂಡಿದ್ದರು.ದಯವಿಟ್ಟು ನನ್ನ ಬರ್ತ್ಡೇಗೆ ಯಾರೂ ಬ್ಯಾನರ್ ಹಾಕಲೇಬೇಡಿ,ಅಭಿಮಾನ ನಿಮ್ಮ ಮನಸ್ಸಲ್ಲಿಯೇ ಇರಲಿ,ಮನಸ್ಸಿನಿಂದಲೇ ನೀವು ವಿಶ್ ಮಾಡಿದ್ರೂ ಸಾಕು ನಾನು ಖಷಿಯಾಗಿರ್ತೀನಿ ಎಂದಿದ್ದರು.
ಇದೀಗ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರು ಜನವರಿ 20ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು,ದಯವಿಟ್ಟು ಬ್ಯಾನರ್ ಯಾರೂ ಹಾಕಬೇಡಿ ಎಂದು ವಿನಂತಿ ಮಾಡಿದ್ದಾರೆ. ಪ್ರತಿ ವರ್ಷವೂ ದೂರದ ಊರುಗಳಿಂದ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಬರುತ್ತಾರೆ. ಕಟೌಟ್, ಹಾಲಿನ ಅಭಿಷೇಕ ಮಾಡಿ ಅಭಿಮಾನ ಮೆರೆಯುತ್ತಾರೆ. ಆದರೆ, ವಿಜಯ್ ಈ ಬಾರಿ ಅಭಿಮಾನಿಗಳಲ್ಲಿ ಈ ರೀತಿ ಮನವಿ ಮಾಡಿದ್ದಾರೆ.
“ಯಾರೂ ಕೂಡ ನನ್ನ ಹುಟ್ಟುಹಬ್ಬ ದಿನ ಕಟೌಟ್, ಬ್ಯಾನರ್ ಹಾಕಬೇಡಿ. ಕಟೌಟ್ಗೆ ಹಾಲಿನ ಅಭಿಷೇಕವನ್ನು ಮಾಡಬೇಡಿ. ಅದರ ಬದಲು ಸಿನಿಮಾ ಬಿಡುಗಡೆ ಯಾದಾಗ ಬಂದು ನೋಡಿ ಪ್ರೋತ್ಸಾಹಿಸಿ’ ಎಂದಿರುವ ವಿಜಯ್, “ದೂರದ ಊರುಗಳಿಂದ ಅಭಿಮಾನಿಗಳು ನಡೆದುಕೊಂಡು ಬರಬೇಡಿ. ಜೊತೆಗೆ ಜ.19ರ ರಾತ್ರಿ ಬರುವ ಬದಲು ಜ.20ರ ಬೆಳಗ್ಗೆಯೇ ಬನ್ನಿ. ಒಟ್ಟಿಗೆ ಕುಳಿತು ಊಟ ಮಾಡೋಣ’ ಎಂದು ಮನವಿ ಮಾಡಿದ್ದಾರೆ.ಸದ್ಯ ದುನಿಯಾ ವಿಜಯ್ ನಿರ್ದೇಶನ, ನಟನೆಯ “ಭೀಮ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.