ನ್ಯೂಸ್ ನಾಟೌಟ್: ಚಿನ್ನಾಭರಣಗಳ ವ್ಯಾಪಾರದಲ್ಲಿ ನಂಬಿಕೆಯ ಹೆಸರು ಗಳಿಸಿರುವ ಸುಳ್ಯದ ಶ್ರೀರಾಮಪೇಟೆಯ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಮೆ/ ಮುಳಿಯ ಕೃಷ್ಣ ಭಟ್ ಸನ್ಸ್ ಸಂಸ್ಥೆ ನ .14 ರಂದು ಮೂವತ್ತೆರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 33ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.
ಚಿನ್ನ ಮತ್ತು ಬೆಳ್ಳಿ ವ್ಯಾಪಾರದಲ್ಲಿ ಸುಳ್ಯದ ಮೆ/ ಮುಳಿಯ ಕೃಷ್ಣ ಭಟ್ ಸನ್ಸ್ ಸಂಸ್ಥೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಗ್ರಾಹಕರಿಗೆ ಒಪ್ಪುವಂತಹ ವಿವಿಧ ವಿನ್ಯಾಸಗಳು, ಆಭರಣಗಳ ಕಲೆಕ್ಷನ್ಗಳಲ್ಲಿ ಸಾಕಷ್ಟು ಆಯ್ಕೆಗಳನ್ನು ಒಳಗೊಂಡಿದೆ. ಮದುವೆ, ಶುಭ ಸಮಾರಂಭಗಳಿಗೆ ಅಗತ್ಯವಾಗಿ ಬೇಕಾಗುವ ಚಿನ್ನದ ಸರ, ನೆಕ್ಲೆಸ್ ಗಳು, ಬಳೆಗಳು, ಕಿವಿಯೋಲೆಗಳ ವಿವಿಧ ಕಲೆಕ್ಷನ್ಗಳು ಇಲ್ಲಿ ಲಭ್ಯವಿದೆ. ಸುಳ್ಯದಲ್ಲಿ ಮೆ / ಮುಳಿಯ ಕೃಷ್ಣ ಭಟ್ ಸನ್ಸ್ ಸಂಸ್ಥೆಯನ್ನು 1991ರಲ್ಲಿ ನವೆಂಬರ್ 14 ರಂದು ಮುಳಿಯ ಗೋವಿಂದ ಭಟ್ ಮತ್ತು ಶಿವರಾಂ ಭಟ್ ಆರಂಭಿಸಿದರು. ಈಗ ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ಗುಣಮಟ್ಟದ ಚಿನ್ನ , ಬೆಳ್ಳಿ ವ್ಯಾಪಾರದಲ್ಲಿ ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾದ ಸಂಸ್ಥೆಯಾಗಿದೆ.