ನ್ಯೂಸ್ ನಾಟೌಟ್: ಸುಳ್ಯ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಕಚೇರಿಗೆ ಮಾಜಿ ಕಬಡ್ಡಿ ಆಟಗಾರ, ತೆಲುಗು ಟೈಟಾನ್ಸ್ ತಂಡದ ಕೋಚ್ ಜಗದೀಶ್ ಕುಂಬ್ಳೆ ಭೇಟಿ ನೀಡಿ ನವೆಂಬರ್ 17 ಮತ್ತು 18 ರಂದು ಸುಳ್ಯದಲ್ಲಿ ನಡೆಯುವ ರಾಷ್ಟ್ರೀಯ A ಗ್ರೇಡ್ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟದ ಸ್ಥಳ ಪರಿಶೀಲಿಸಿದರು.
ಸುಳ್ಯದಲ್ಲಿ ನಡೆಯುವ ರಾಷ್ಟ್ರೀಯ A ಗ್ರೇಡ್ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟದ ಬಗ್ಗೆ ಮಾಹಿತಿ ಪಡೆದ ಜಗದೀಶ್ ಕುಂಬ್ಳೆ ಅವರು ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸಲಹೆಗಳನ್ನು ನೀಡಿದರು. ಪಂದ್ಯಾಟಕ್ಕೆ ತಮ್ಮ ಪೂರ್ತಿ ಸಹಕಾರ ನೀಡುವುದಾಗಿ ತಿಳಿಸಿದರು. ಸಂಘದ ಖಜಾಂಚಿ ಜಿ.ಎ. ಮೊಹಮ್ಮದ್, ಜಿ.ಜಿ. ನಾಯಕ್, ಶಾಫಿ ಪ್ರಗತಿ, ಮಧುಸೂಧನ್ ನಾಯರ್, ರಕ್ಷಿತ್, ಶ್ರೀಧರ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.