ನ್ಯೂಸ್ ನಾಟೌಟ್: ಹುಲಿಗಳ ನಡುವೆ ಘೋರ ಕದನವೊಂದು ಕರಾವಳಿಯ ಪ್ರಸಿದ್ಧ ವನ್ಯ ಮೃಗಗಳ ತಾಣ ಮಂಗಳೂರು ಜೈವಿಕ ಉದ್ಯಾನವನದಲ್ಲಿ ನಡೆದಿದೆ. ಈ ಕದನದಲ್ಲಿ ಒಂದು ಹುಲಿ ದಾರುಣವಾಗಿ ಸಾವನ್ನಪ್ಪಿದೆ.
ಮೂರು ದಿನಗಳ ಹಿಂದೆ ಹುಲಿಗಳ ನಡುವೆ ಗಲಾಟೆ ನಡೆದಿತ್ತು. ಘಟನೆಯಲ್ಲಿ 15 ವರ್ಷದ ಹೆಣ್ಣು ಹುಲಿ ಗಂಭೀರವಾಗಿ ಗಾಯಗೊಂಡಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆದರೆ ಅದು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೆ ಮೃತಪಟ್ಟಿದೆ ಎಂದು ಪಿಲಿಕುಳ ಜೈವಿಕ ಉದ್ಯಾನ ವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಮಾಹಿತಿ ನೀಡಿದ್ದಾರೆ.
- +91 73497 60202
- [email protected]
- October 7, 2024 12:00 AM