ನ್ಯೂಸ್ ನಾಟೌಟ್ : ಕೆ.ವಿ.ಜಿ ವೈದ್ಯಕೀಯ ಕಾಲೇಜ್ ನಲ್ಲಿ 2022-2023ರ ಎಂ. ಬಿ.ಬಿ. ಎಸ್ ನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಕೆ.ವಿ.ಜಿ ಕಾಲೇಜು ಹಾಗೂ ಆಸ್ಪತ್ರೆ ವತಿಯಿಂದ ವೈಟ್ ಕೋಟ್ ಸಮಾರಂಭ ಹಾಗೂ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಹಾಗೂ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಕೆ.ವಿ ಚಿದಾನಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿರಬೇಕು.ಕೆಟ್ಟ ಅಭ್ಯಾಸಗಳ ಕಡೆಗೆ ಗಮನ ಕೊಡದೇ ಕೇವಲ ಓದಿನತ್ತ ಗಮನ ಕೊಡಬೇಕು. ಹೆತ್ತವರ ಕಠಿಣ ಪರಿಶ್ರಮವನ್ನು ಮೊದಲು ನೆನಪಿನಲ್ಲಿಟ್ಟುಕೊಂಡು, ಉತ್ತಮ ಸಾಧನೆಗಳನ್ನು ಮಾಡಬೇಕು ಎಂದು ಹಿತನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಮಂಗಳೂರಿನ ಎಜೆ ಡೆಂಟಲ್ ಸೈನ್ಸ್ ನಲ್ಲಿ ಆರ್ಜಿ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ಮತ್ತು ಅಸೋಸಿಯೇಟ್ ಪ್ರೋಫೆಸರ್ ಡಾ. ಶರಣ್ ಜೆ ಶೆಟ್ಟಿ ಮಾತನಾಡಿ, ಕೆವಿಜಿ ಸಂಸ್ಥೆಯಲ್ಲಿ ಓದುತ್ತಿರುವುದು ವಿದ್ಯಾರ್ಥಿಗಳ ಪೋಷಕರಿಗೆ ಹೆಮ್ಮೆ. ಇದು ಒಳ್ಳೆಯ ಸಂಸ್ಥೆಯಾಗಿರುವುದರಿಂದ ಸಮರ್ಥ ನಾಯಕತ್ವ ಗುಣ ಹೊಂದಿದೆ. ಎಂ.ಬಿ.ಬಿ. ಎಸ್ ನ ವಿದ್ಯಾರ್ಥಿಗಳು ಮೊದಲು ಕಲಿಯುವುದರ ಕಡೆಗೆ ಗಮನ ಕೊಡಿ, ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಬೇರೆ ಶೈಲಿಯಲ್ಲಿ ಬರೆಯುವುದನ್ನು ನೋಡಿ, ಸುಲಭವಾಗಿ ಕಲಿಯಿರಿ. ಇಂದಿನಿಂದ ಹೊಸ ಜರ್ನಿ. ಈ ಜರ್ನಿಯಲ್ಲಿ ಒಳ್ಳೆಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಿ. ಒಂದು ಕಟ್ಟಡ ಕಟ್ಟಲು ಕೆಳಗೆ ಅಡಿಪಾಯ ಗಟ್ಟಿ ಇರಬೇಕು, ಹಾಗೆಯೇ ಮೊದಲ ವರ್ಷದಿಂದಲೇ ಅಡಿಪಾಯವನ್ನು ಗಟ್ಟಿ ಮಾಡಿಕೊಳ್ಳಿ ಎಂದು ಹೇಳಿದರು.
ಬಳಿಕ ಕಾರ್ಯಕ್ರಮದಲ್ಲಿ ಎಂ ಬಿಬಿಎಸ್ ನ ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ವಿತರಿಸಿ ಶುಭಾಶಯ ಕೋರಿದರು. ಜೊತಗೆ ಪ್ರಮಾಣ ವಚನ ಸ್ವೀಕರಿಸಿದರು. ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಉಪಾಧ್ಯಕ್ಷ ಶೋಭಾ ಚಿದಾನಂದ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಹಾಗೂ ಕೆವಿಜಿಎಮ್ ಸಿ ಹೆಚ್ ನ ಕಾರ್ಯದರ್ಶಿ ಮತ್ತು ಆರ್ ಜಿ ಯು ಹೆಚ್ ಎಸ್ ನ ಸೆನೆಟ್ ಸದಸ್ಯ ಡಾ. ಐಶ್ವರ್ಯ ಕೆ.ಸಿ, ಕೆವಿಜಿ ಎಂಸಿಎಚ್ ನಿರ್ದೇಶಕ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಖಜಾಂಜಿ, ಡಾ.ಗೌತಮ್ ಗೌಡ ಎಜಿ, ಕೆವಿಜಿ ಎಮ್ ಸಿ ಹೆಚ್ ಡೀನ್ ಡಾ. ನೀಲಾಂಬಿಕೈ ನಟರಾಜನ್, ಕೆವಿಜಿ ಎಮ್ ಸಿ ಹೆಚ್ ನ ಮಾಜಿ ಪ್ರಾಂಶುಪಾಲ, ಕರ್ನಾಟಕ ಸರ್ಕಾರದ ಮಾಜಿ ಡಿ ಎಮ್ ಇ ಎಮರಿಟಸ್ ಪ್ರೊಫೆಸರ್ ಡಾ. ಶೀಲಾ ಜಿ ನಾಯಕ್, ಕೆವಿಜಿ ಎಮ್ ಸಿ ಹೆಚ್ ಜನರಲ್ ಸರ್ಜರಿ ವಿಭಾಗದ ವೈದ್ಯಕೀಯ ಅಧೀಕ್ಷಕರು, ಪ್ರಾಧ್ಯಾಪಕರು ಡಾ ಗೋಪಿನಾಥ್ ಪೈ, ಸಮುದಾಯ ಚಲನೆಯ ವಿಭಾಗದ ಮುಖ್ಯಸ್ಥ ಹಾಗೂ ಕೆವಿಜಿ ಎಮ್ ಸಿ ಹೆಚ್ ನ ಹುಡುಗರ ಹಾಸ್ಟೆಲ್ ನ ಮುಖ್ಯ ವಾರ್ಡನ್ ದಿನೇಶ್ ಪಿ. ವಿ, ಪೆಥಾಲಜಿ ವಿಭಾಗದ ಪ್ರೊಫೆಸರ್ ಮತ್ತು ಕೆವಿಜಿ ಎಮ್ ಸಿ ಹೆಚ್ ನ ಹುಡುಗಿಯರ ಹಾಸ್ಟೆಲ್ ನ ಮುಖ್ಯ ವಾರ್ಡನ್ ಡಾ. ನವ್ಯಾ ಬಿ. ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿ ಲಿಬರಲ್ ಆಫ್ ಎಜುಕೇಶನ್ ಕಾರ್ಯದರ್ಶಿ ಹೇಮನಾಥ್ ಹಾಗೂ ಅಕಾಡೆಮಿ ಲಿಬರಲ್ ಆಫ್ ಎಜುಕೇಶನ್ ನ ಆಡಳಿತ ಮಂಡಳಿಯ, ಸದಸ್ಯ ಜಗದೀಶ್ ಅಡ್ತಲೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.