ಭಕ್ತಿಭಾವ

ಮಹಾಶಿವ ರಾತ್ರಿ ಸಂಭ್ರಮ, ವಿಷಕಂಠನಿಗೆ 11 ಕೆ.ಜಿ ತೂಕದ ಚಿನ್ನದ ಮುಖವಾಡ

ನ್ಯೂಸ್ ನಾಟೌಟ್ : ಇಂದು ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಸಡಗರ. ಬೆಳಗ್ಗೆಯಿಂದ ಭಕ್ತಾಧಿಗಳು ಶಿವದೇಗುಲಕ್ಕೆ ಭೇಟಿ ನೀಡಿ ಶಿವನ ದರ್ಶನ ಪೆಡದು ಪುನೀತರಾಗಿದ್ದಾರೆ. ಈ ವೇಳೆ ಮೈಸೂರು ರಾಜವಂಶಸ್ಥ ಜಯಚಾಮ ರಾಜೇಂದ್ರ ಒಡೆಯರ್ ಅವರು ಮೈಸೂರಿನ ತ್ರಿನೇಶ್ವರ ದೇವಾಲಯಕ್ಕೆ 11 ಕೆ.ಜಿ ತೂಕದ ಚಿನ್ನದ ಮುಖವಾಡವನ್ನು ಸಮರ್ಪಿಸಿದ್ದಾರೆ.

ಮೈಸೂರು ಅರಮನೆ ರಾಜವಂಶದ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಹಿನ್ನಲೆಯಲ್ಲಿ ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ ದೇವಸ್ಥಾನದ ಶಿವನಿಗೆ ವಿಶೇಷವಾಗಿ ಅಲಂಕಾರಗೊಳಿಸಿದ 11 .ಕೆ.ಜಿ. ತೂಕದ ಚಿನ್ನದ ಮುಖವಾಡ ಸಮರ್ಪಸಿದರು. ಈ ವೇಳೆ ಅರಮನೆ ಅಧಿಕಾರಿಗಳು, ಸಿಬ್ಬಂದಿ , ಕ್ಷೇತ್ರ ಕಾರ್ಯನಿರ್ವಹಣಾಧೀಕಾರಿಗಳು ಉಪಸ್ಥಿತರಿದ್ದರು.

Related posts

ಸತ್ಕಾರ್ಯದಿಂದ ದೇವರ ಅನುಗ್ರಹ: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ತೊಡಿಕಾನ: ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ದಲ್ಲಿ ಗೋಪೂಜೆ

ಅಯೋಧ್ಯೆಯ ಶ್ರೀರಾಮನ ಮೂರ್ತಿ ಕೆತ್ತನೆಗೆ ಕಾರ್ಕಳದ ಕೃಷ್ಣ ಶಿಲೆ