ನ್ಯೂಸ್ ನಾಟೌಟ್ : ಹಗಲಿರುಳು ದುಡಿದು ದೇಶ -ರಾಜ್ಯಕ್ಕಾಗಿ ಬೆನ್ನೆಲುಬಾಗಿರುವ ಕಟ್ಟಡ ಕಾರ್ಮಿಕರನ್ನು ದೇಶ ದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ. ಇದು ಖಂಡನೀಯ ಎಂದು ನ್ಯಾಯವಾದಿ ಹಾಗೂ ಕಾರ್ಮಿಕ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಬಿಎಂ ಭಟ್ ತಿಳಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರನ್ನು ಸುಳ್ಯದಲ್ಲಿ ಕೆಲವರು ಕೆಂಬಾವುಟ ದೇಶದ್ರೋಹಿಗಳ ಚೀನಾ ಸಂಘಟನೆ ಪಡೆ ಎಂದು ಜಾಲತಾಣಗಳಲ್ಲಿ ಸಂದೇಶವನ್ನು ಹಾಕಿದ್ದಾರೆ. ಇದು ಇಡೀ ಕಾರ್ಮಿಕ ಸಂಘಟನೆಗೆ ಅವಮಾನ ಹಾಗೂ ಬೇಸರ ತಂದಿದೆ. ಸರಕಾರದ ನಿರ್ಲಕ್ಷ್ಯವನ್ನು ಕುರಿತು ತಾಲೂಕು ,ಜಿಲ್ಲೆಗಳಲ್ಲಿ ಹೋರಾಟ ನಡೆದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಇದರ ಹೋರಾಟವನ್ನು ನಡೆಸಲಾಗುತ್ತದೆ. ಈ ಬಗ್ಗೆ ಸಿಐಟಿಯು ಸಭೆ ಅಖಿಲ ಭಾರತ ಸಮ್ಮೇಳನವು ಜನವರಿ ೧೮ ರಿಂದ ೨೩ ರವರೆಗೆ ನಡೆಯಲಿದ್ದು , ಸಾವಿರಾರು ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಸಿಐಟಿಯು ನಾಯಕ ಜಾನಿ , ವಿಶ್ವನಾಥ್ ಎಂ , ಪ್ರಸಾದ್ ಮತ್ತಿತರರು ಹಾಜರಿದ್ದರು.