ನ್ಯೂಸ್ ನಾಟೌಟ್: ಕೊಡಿನ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ಶ್ರೀ ಓಂಕಾರೇಶ್ವರ ದೇವಸ್ಥಾನವೂ ಒಂದು. ಇದೀಗ ಈ ದೇವಸ್ಥಾನಕ್ಕೆ ಸೇರಿದ ಕರೆಯಲ್ಲಿ ಆಮೆ, ಮೀನುಗಳು ಕಲುಷಿತ ನೀರಿನ ಹಿನ್ನೆಲೆಯಲ್ಲಿ ಸಾವಿಗೀಡಾಗುತ್ತಿದೆ. ಸುತ್ತಲಿನ ವಾತಾವರಣ ಗಬ್ಬು ನಾರುತ್ತಿದೆ ಎಂದು ಭಕ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಆಡಳಿತ ವ್ಯ ವಸ್ಥೆಯ ನಿರ್ಲಕ್ಷ್ಯ ದ ವಿರುದ್ಧ ಭಕ್ತರು ತೀವ್ರ ಅಸಮಾಧಾನ ವ್ಯ ಕ್ತಪಡಿಸಿದ್ದಾರೆ. ಸುತ್ತಲಿನ ವಾತಾವರಣ ಮಲಿನಗೊಂಡಿದೆ. ಇಷ್ಟಿದ್ದರೂ ಮುಜರಾಯಿ ಇಲಾಖೆ ಇದುವರೆಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಮೃತಪಟ್ಟ ಎರಡು ಆಮೆಗಳ ದೇಹ ನೀರಿನಲ್ಲಿ ತೇಲುತ್ತಿದೆ. ಮೀನುಗಳು ಕೂಡ ಸಾಯುವ ಹಂತದಲ್ಲಿದೆ. ಇದು ನೀರಿನ ಮಾಲಿನ್ಯದಿಂದಲೇ ಆಗಿದೆ. ಹೀಗಾಗಿ ತಕ್ಷಣ ಇದನ್ನು ಸರಿಪಡಿಸಬೇಕು. ಭಕ್ತರು ತಿಂಡಿ ತಿನಿಸುಗಳನ್ನು ತಂದು ಹಾಕುತ್ತಿದ್ದಾರೆ. ಇದರಿಂದಲೂ ಜಲಚರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.