ನ್ಯೂಸ್ ನಾಟೌಟ್ : ಕರಿಮೆಣಸು ಕಳವು ಪ್ರಕರಣವೊಂದರಲ್ಲಿ ಐವರು ಆರೋಪಿಗಳನ್ನು ಬಂಧಿಸಿ ಅವರಿಂದ ಕಳುವಾದ ಕರಿಮೆಣಸು, ನಗದು ಹಾಗೂ ಒಂದು ಜೀಪನ್ನು ವಶಪಡಿಸಿಕೊಳ್ಳುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಅತ್ತೂರು ನಲ್ಲೂರು ಗ್ರಾಮದ ಮಹಾಲಕ್ಷ್ಮಿ ಎಸ್ಟೇಟ್ ಎಂಬ ಕಾಫಿ ತೋಟವೊಂದರ ತೋಟದ ಮನೆಯಿಂದ ದಿನಾಂಕ 17/10/2022 ರಿಂದ 19/10/2022ರ ನಡುವೆ ಸುಮಾರು ರೂ.4ಲಕ್ಷ ಮೌಲ್ಯದ 800 ಕೆ.ಜಿ. ಕರಿಮೆಣಸನ್ನು ಯಾರೋ ಕಳ್ಳರು ಮನೆಯ ಹೆಂಚು ತೆಗೆದು ಒಳ ಪ್ರವೇಶಿಸಿ ಕಳವು ಮಾಡಿರುವುದಾಗಿ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ವಾಸಿ ಹಾಲಿ ಇದೇ ಕಾಪೀ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಎಂ.ಸಿ.ಕಾಳಪ್ಪ ಎಂಬ ಐವರನ್ನು ಬಂಧಿಸಿ ಅವರಿಂದ ಕಳವು ಮಾಡಿದ 800 ಕೆ.ಜಿ. ಕರಿಮೆಣಸು, ನಗದು ಹಣ ರೂ.1.67 ಲಕ್ಷ ಹಾಗೂ ಕಳವಿಗೆ ಉಪಯೋಗಿಸಿದ ಒಂದು ಮಹೀಂದ್ರಾ ಜೀಪನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.