ನ್ಯೂಸ್ ನಾಟೌಟ್: ಕನ್ನಡದ ಅಕ್ಷರಗಳ ಕಗ್ಗೊಲೆಯೊಂದಿಗೆ ಸರಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಮಾಡದಂತೆ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರಕಾರ ರಾತ್ರೋರಾತ್ರಿ ಹಿಂಪಡೆದಿದೆ.
ಆದೇಶದಲ್ಲಿ ಹಲವು ಅಕ್ಷರದೋಷ ಕಾಣಿಸಿಕೊಂಡಿದ್ದು ಅಕ್ಷರಶಃ ಕನ್ನಡವನ್ನು ಕೊಲೆ ಮಾಡಲಾಗಿದೆ. ಆ ಮೂಲಕ ಈ ಆದೇಶ ಸರಕಾರದ ಅಧಿಕಾರಿಗಳ ಕನ್ನಡ ಜ್ಞಾನಕ್ಕೆ ಕನ್ನಡಿ ಹಿಡಿದಿದೆ. .ಅಧಿಕಾರಿಗಳು ನಿದ್ದೆಗಣ್ಣಿನಿಂದ ಮರು ಆದೇಶ ಹೊರಡಿಸಿದಂತಿದೆ. ಆದೇಶದ ಪ್ರತಿಯಲ್ಲಿ ಆರಂಭದಿಂದ ಕೊನೆಯವರಿಗೆ ತಪ್ಪುಗಳೇ ನುಸುಳಿವೆ. ಸರಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಮಾಡದಂತೆ ಹೊರಡಿಸಿದ್ದ ಆದೇಶದಿಂದ ಮುಜುಗರಕ್ಕೆ ಒಳಗಾಗುವ ಸಾಧ್ಯತೆಯ ಅರಿವು ಆಗುತ್ತಿದ್ದಂತೆ ಶುಕ್ರವಾರ ತಡರಾತ್ರಿ 2 ಗಂಟೆಗೆ ತರಾತುರಿಯಲ್ಲಿ ಈ ಆದೇಶವನ್ನು ವಾಪಸು ಪಡೆದು ಮರು ಆದೇಶ ಹೊರಡಿಸಲಾಗಿದೆ
* ನಡಾವಳಿಗಳು– ನಡವಳಿಗಳು
* ಪ್ರಸ್ತಾವನೆ– ಪ್ರಸತ್ತಾವನೆ
* ಮೇಲೆ– ಮೇಲೇ
* ಭಾಗ–1– ಬಾಗ–1
* ಕರ್ನಾಟಕ– ಕರ್ನಾಟಾ
* ಆಡಳಿತ– ಆಡಳಿದ