ಸುಳ್ಯ: ಇಲ್ಲಿನ ಸಿಟಿ ಮೆಡಿಕಲ್ ಮಾಲೀಕ ಅಬ್ದುಲ್ ಮಜೀದ್ ರವರು ತನ್ನ ಸ್ಕೂಟಿಯಲ್ಲಿ ಹಳೆಗೇಟು ಕಡೆಯಿಂದ ಸುಳ್ಯ ಪೇಟೆಗೆ ಬರುತ್ತಿದ್ದ ಸಂದರ್ಭ ಸುಳ್ಯ ಪೇಟೆಯಿಂದ ಹಳೆಗೇಟ್ ಕಡೆಗೆ ತೆರಳುತ್ತಿದ್ದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಜ. 23 ರಂದು ರಾತ್ರಿ ಸುಳ್ಯ ವೆಂಕಟ್ರಮಣ ಸೊಸೈಟಿ ಬಳಿ ದುರ್ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡ ವ್ಯಕ್ತಿ ಮಂಡೆಕೋಲು ಗ್ರಾಮದ ಪ್ರೀತೇಶ್ ಕಾಡುಸೊರಂಜ ಎಂದು ತಿಳಿದುಬಂದಿದೆ.
- +91 73497 60202
- [email protected]
- October 6, 2024 11:13 PM