ಕಾಸರಗೋಡು : ಕೊರಗಜ್ಜನ ವೇಷ ಧರಿಸಿ ವಿವಾದಕ್ಕೆ ಕಾರಣನಾಗಿದ್ದ ಮದುಮಗನ ಮನೆ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು ಮನೆಯ ಗೇಟ್ ನ ಗೋಡೆಗೆ ಕಾವಿ ಬಣ್ಣ ಬಳಿದ ಘಟನೆ ವರದಿಯಾಗಿದೆ. ಬೇಕೂರು ಅಗರ್ತಿಮೂಲೆಯಲ್ಲಿರುವ ವರನ ಮನೆಗೆ ಕಲ್ಲೆಸೆಯಲಾಗಿದ್ದು, ಮನೆಯ ಮುಂಭಾಗದ ಎರಡು ಕಿಟಕಿ ಗಾಜುಗಳು ಹುಡಿಯಾಗಿವೆ. ಸೋಮವಾರದಂದು(ಜ. 17) ಮುಂಜಾನೆಯ ವೇಳೆಗೆ ಬೈಕ್ ನಲ್ಲಿ ಬಂದ ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದು, ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
- +91 73497 60202
- [email protected]
- September 19, 2024 8:41 PM