ಸುಳ್ಯ: ಅರಂತೋಡು ಕಾಮದೇನು ಹೋಟೆಲ್ ಬಳಿಯ ತಿರುವಿನಲ್ಲಿ ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಐರಾವತ ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಸರಿದು ಮರಕ್ಕೆ ಡಿಕ್ಕಿಯಾಗಿದೆ. ತಡರಾತ್ರಿ ಈ ಘಟನೆ ನಡೆದಿದೆ. ಬಸ್ನೊಳಗೆ ಸ್ವಲ್ಪ ಮಂದಿ ಪ್ರಯಾಣಿಕರಷ್ಟೇ ಇದ್ದರೆಂದು ತಿಳಿದು ಬಂದಿದೆ. ಯಾವುದೇ ಅಪಾಯವಾಗಿರುವ ಕುರಿತು ವರದಿಯಾಗಿಲ್ಲ. ಘಟನೆಯೊಂದರಲ್ಲಿ ವಿದ್ಯುತ್ ಕಂಬ ವೊಂದು ತೀವ್ರವಾಗಿ ಹಾನಿಯಾಗಿದ್ದು ಭಾರಿ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
![](https://newsnotout.com/wp-content/uploads/2021/12/2.jpg)
![](https://newsnotout.com/wp-content/uploads/2021/12/3.jpg)
![](https://newsnotout.com/wp-content/uploads/2021/12/4.jpg)