ಕ್ರೈಂ

ಯಕ್ಷ ಲೋಕದ ಗಾನ ಗಂಧರ್ವ ಪದ್ಯಾಣ ಗಣಪತಿ ಭಟ್ ಇನ್ನಿಲ್ಲ

747

ಸುಳ್ಯ: ಯಕ್ಷಗಾನ ರಂಗದ ಹಿರಿಯ ಭಾಗವತ, ಗಾನ ಗಂಧರ್ವರೆಂದೇ ಪ್ರಸಿದ್ಧರಾದ ಪದ್ಯಾಣ ಗಣಪತಿ ಭಟ್ ನಿಧನರಾಗಿದ್ದಾರೆ. ಅವರಿಗೆ 66 ವರ್ಷವಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅಸೌಖ್ಯದಿಂದ ಬಳಲುತ್ತಿದ್ದರು. ಕಲ್ಮಡ್ಕದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಾಲ್ಕು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಮಿಂಚಿ ಹಲವಾರು ಅಭಿಮಾನಿಗಳ ಪ್ರೀತಿಗೆ ಪಾತ್ರರಾದವರು. ಹದಿನಾರನೇ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರದಲ್ಲಿ ಮಿಂಚಿದವರು. ಸತಿ ಶೀಲಾವತಿ, ರಾಣಿ ರತ್ನಾವಳಿ, ಕಡುಗಲಿ ಮಾರರಾಮ, ಪಾಪಣ್ಣ ವಿಜಯ ಗುಣಸುಂದರಿ, ಬಪ್ಪನಾಡು ಕ್ಷೇತ್ರ ಮಹಾತ್ಮೆ ಅನೇಕ ಪ್ರಸಂಗಗಳು ಪದ್ಯಾಣರ ಭಾಗವತಿಕೆಯ ಕಾರಣದಿಂದಲೇ ಯಶಸ್ಸು ಕಂಡಿತ್ತು. ದೇಶ -ವಿದೇಶಗಳಲ್ಲಿ ಗಣಪತಿ ಭಟ್ ಅಭಿಮಾನಿ ಬಳಗವನ್ನು ಹೊಂದಿದ್ದರು. ಪತ್ನಿ ಶೀಲಾ ಶಂಕರಿ, ಮಕ್ಕಳಾದ ಸ್ವಸ್ತಿಕ್ ಕಾರ್ತಿಕ್ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

See also  ಉಡುಪಿ ಕೊಲೆ ಪ್ರಕರಣ: ಪೊಲೀಸ್ ಮಹಜರು ವೇಳೆ ಜನರು ದಾಳಿ ಮಾಡಿದ್ದೇಕೆ? ಪೊಲೀಸರು ಲಾಠಿಚಾರ್ಜ್ ಮಾಡುವಂತದ್ದೇನಾಗಿತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget   Ad Widget