ಮಡಿಕೇರಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಮಹಿಳಾ ತಂಡದ ಸ್ಮರಣೀಯ ಸಾಧನೆಗೆ ಕೊಡುಗೆ ನೀಡಿದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾದ ಕೊಡಗಿನ ಕಂಬಿಬಾಣೆಯ ಅಂಕಿತಾ ಸುರೇಶ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸನ್ಮಾನಿಸಿದರು. ಅಂಕಿತಾ ಅವರಿಗೆ 10 ಲಕ್ಷ ರೂ. ಕೊಡುಗೆಯನ್ನು ಯೋಗಿ ಆದಿಥ್ಯನಾಥ್ ನೀಡಿದರು. ಅಂತೆಯೇ ಒಡಿಶಾ ಮುಖ್ಯಮಂತ್ರಿ ಬಿಜು ಪಾಟ್ನಾಯಕ್ ಕೂಡ ಅಂಕಿತಾ ಸುರೇಶ್ ಹಾಗೂ ಭಾರತೀಯ ಮಹಿಳಾ ಹಾಕಿ ತಂಡದ ಆಟಗಾತಿ೯ಯರನ್ನು ಒಡಿಶಾ ಪರವಾಗಿ ಸನ್ಮಾನಿಸಿದ್ದಾರೆ.