ಕ್ರೈಂ

ವಿಟ್ಲ: ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ 22 ವರ್ಷದ ಯುವತಿ

ವಿಟ್ಲ: ಯುವತಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ಅಕ್ಟೋಬರ್‌ 11 ರಂದು ನಡೆದಿದೆ. ಇಲ್ಲಿನ ಸಮೀಪದ ಪಂಚಲಿಗೇಶ್ವರ ದೇವಸ್ಥಾನದ ಸಮೀಪದ ಮನೆಯ ಬಳಿ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವಿಟ್ಲ ಕಸಬಾ ಗ್ರಾಮದ ನೆತ್ರಕರೆ ನಿವಾಸಿ ಬಾಬು ನಾಯ್ಕ್ ಮಗಳು ನಿಶ್ಚಿತಾ (22 ವರ್ಷ) ಎಂದು ಗುರುತಿಸಲಾಗಿದೆ. ಡೆಂಟಲ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ನಿಶ್ಚಿತಾ ನಿನ್ನೆ ಸಂಜೆಯಿಂದ ಕಾಣೆಯಾಗಿದ್ದಳು. ಹುಡುಕಾಡಿದಾಗ ಇಂದು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿದ್ದಾಳೆ. ಡೆತ್‌ ನೋಟ್ ನಲ್ಲಿ ಹಲವರ ಹೆಸರು ಬರೆದಿಟ್ಟಿದ್ದಾಳೆ ಎನ್ನಲಾಗಿದೆ. ವಿಟ್ಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related posts

ಕೋಚಿಂಗ್ ಸೆಂಟರ್ ಗೆ ನೀರು ನುಗ್ಗಿ 3 ವಿದ್ಯಾರ್ಥಿಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್..! 13 ಅಕ್ರಮ ಕೋಚಿಂಗ್ ಸೆಂಟರ್‌ ಗಳಿಗೆ ಬೀಗ..!

ಈ ಸಂಸದೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದರಾ..? ಸುಪ್ರೀಂ ಕೋರ್ಟ್‌ ವಕೀಲ ನೀಡಿದ ದೂರಿನಲ್ಲೇನಿದೆ? ಇಂದು ವಿಚಾರಣೆಗೆ ಹಾಜರಾಗ್ತಾರಾ..?

7 ವರ್ಷದ ಮಗಳ ಮೇಲೆ ಪ್ರೇಮಿಗೆ ರೇಪ್ ಮಾಡಲು ತಾಯಿಯೇ ಅನುಮತಿ ಕೊಟ್ಟಳಾ..? ಮಹಿಳೆಗೆ 40 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ ಹೇಳಿದ್ದೇನು? ಏನಿದು ವಿಕೃತ ಘಟನೆ?