ರಾಜಕೀಯ

ಯಡಿಯೂರಪ್ಪರ ಮಗ ವಿಜೆಯೇಂದ್ರಗೆ ಮಂತ್ರಿ ಸ್ಥಾನ ಸಿಗುವುದೇ? ಈ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು?

838

ಬೆಂಗಳೂರು: ಹೈಕಮಾಂಡ್ ಸೂಚಿಸಿದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಮಗ ವಿಜೆಯೇಂದ್ರ ಅವರಿಗೆ ಮಂತ್ರಿ ಸ್ಥಾನ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಈ ಬಾರಿಯ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮಾಜಿ ಮಂತ್ರಿಗಳು, ಬಿಜೆಪಿ ಶಾಸಕರು ಈಗಾಲೇ ಲಾಬಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹುಲಗುಂದ ಶಾಸಕ ದೊಡ್ಡಣ್ಣ ಗೌಡ ಪಾಟೀಲ್ ತನ್ನ 500 ಮಂದಿ ಬೆಂಬಲಿಗರನ್ನು ತಂದು ಅವರ ಮೂಲಕ ತನ್ನನ್ನು  ಮಂತ್ರಿ ಮಾಡುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕೆಲವರು ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ . ರಾಜ್ಯದ ಕ್ಯಾಬಿನೆಟ್ ಲಿಸ್ಟ್  ಇಂದು ಫೈನಲ್ ಆದರೆ ನಾಳೆ ನೂತನ ಸಚಿವ ಸಂಪುಟದ ಪ್ರಮಾಣ ವಚನ ನಡೆಯಲಿದೆ. ನಾಳೆ ಕ್ಯಾಬಿನೆಟ್ ಲಿಸ್ಟ್ ಫೈನಲ್ ಆದರೆ ಬುಧವಾರ  ಪ್ರಮಾಣವಚನ ನಡೆಯಲಿದೆ ಒಟ್ಟು ಎರಡು ಹಂತದಲ್ಲಿ ಕ್ಯಾಬಿನೆಟ್ ವಿಸ್ತರಣೆ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.

See also  ಕಾರ್ಕಳ : ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಮುನಿಯಾಲು-ಕಬ್ಬಿನಾಲೆ ಗೇರು ಬೀಜ ಕಾರ್ಖಾನೆಗೆ ಭೇಟಿ
  Ad Widget   Ad Widget   Ad Widget   Ad Widget   Ad Widget