ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಪಡೆದ ಸ್ವೀಕರಿಸಿದ ತಮಿಳು ದಿಗ್ಗಜ ನಟ ಅಜಿತ್ ಕುಮಾರ್, ಇದೀಗ ತಮ್ಮ ಸಿನಿ ವೃತ್ತಿಗೆ ಗುಡ್ ಬೈ ಹೇಳುವ ಮನಸ್ಸು ಮಾಡಿದ್ದಾರೆ ಎಂದು ಸಿನಿ ವದಂತಿಗಳು ಹಬ್ಬುತ್ತಿವೆ. ಇದಕ್ಕೆ ಸ್ವತಃ ಅಜಿತ್ ಉತ್ತರಿಸಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ರಾಜಕೀಯಕ್ಕೆ ಪ್ರವೇಶಿಸಬಹುದು ಮತ್ತು ಈ ವಿಷಯದಲ್ಲಿ ನಟರಿಗೆ ಯಾವುದೇ ನಿರ್ಬಂಧಗಳಿಲ್ಲ. ರಾಜಕೀಯ ಪ್ರವೇಶಿಸುವ ಭರವಸೆ ಅಥವಾ ಯೋಚನೆ ನನಗಿಲ್ಲ. ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ನನಗೆ ಖುಷಿಯಿದೆ. ಇದು ಅವರ ಅತ್ಯಂತ ಧೈರ್ಯಶಾಲಿ ಹೆಜ್ಜೆ” ಎಂದು ತಾನು ರಾಜಕೀಯ ಎಂಟ್ರಿ ಮಾಡುತ್ತಿಲ್ಲ ಮತ್ತು ಸ್ನೇಹಿತ ವಿಜಯ್ ಗೆ ಶ್ಲಾಘಿಸಿದ್ದಾರೆ.
“ರಾಜಕೀಯದಲ್ಲಿ ಬದಲಾವಣೆ ತರಬಹುದು ಎಂಬ ನಂಬಿಕೆಯೊಂದಿಗೆ ರಾಜಕೀಯ ಪ್ರವೇಶಿಸುವ ಎಲ್ಲರಿಗೂ ಯಶಸ್ಸು ಸಿಗಲಿ ಎಂದು ನಾನು ಹಾರೈಸುತ್ತೇನೆ. 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ವಿವಿಧ ಧರ್ಮ, ಜಾತಿ ಮತ್ತು ಭಾಷೆಯ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ ಮತ್ತು ರಾಜಕೀಯ ನಾಯಕರು ಮಾತ್ರ ಅವರೆಲ್ಲರನ್ನೂ ಒಗ್ಗಟ್ಟಿನಿಂದ ಮುನ್ನಡೆಸುವ ಶಕ್ತಿ ಹೊಂದಿದ್ದಾರೆ” ಎಂದು ಹೇಳಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಮಂಗಳೂರಿಗೆ ಬಂದ ಗೃಹ ಸಚಿವ..! ಮುಸ್ಲಿಂ ಮುಖಂಡರು ಮತ್ತು ಪೊಲೀಸರ ಜೊತೆ ಸಭೆ..!