ಸುಳ್ಯ

ರೈಲಿನಡಿಗೆ ಬಿದ್ದು ಎಡಮಂಗಲ ಗ್ರಾಮದ ಪಟ್ಲದಮೂಲೆ ಯುವಕ ಸಾವು

845

ಸುಳ್ಯ: ಎಡಮಂಗಲದಲ್ಲಿ ರೈಲಿನಡಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.  ಎಡಮಂಗಲ ಗ್ರಾಮದ ಪಟ್ಲದಮೂಲೆ ನಿವಾಸಿ ಭರತ್ (24) ಮೃತಪಟ್ಟ ದುರ್ದೈವಿ. ಎಡಮಂಗಲದ ದಡ್ಡು ಕುಶಾಲಪ್ಪ ಯಾನೆ ಪೂವಪ್ಪ ನಾಯ್ಕರ ಪುತ್ರರಾಗಿರುವ ಭರತ್ ಕೂಲಿ ಕೆಲಸಕ್ಕೆ ಹೋಗುವವರಾಗಿದ್ದು,  ಸಂಜೆ  ಎಡಮಂಗಲದಲ್ಲಿರುವ ಟೈಲರ್ ಶಾಪ್ ಗೆ ಹೋಗಿ ಹಿಂತಿರುಗುವ ಸಂದರ್ಭದಲ್ಲಿ  ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲಿನ ಅಡಿಗೆ ಬಿದ್ದು ಮೃತಪಟ್ಟರೆನ್ನಲಾಗಿದೆ. ಇವರು ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದರು.

See also  ಸುಳ್ಯ:'ಮೇರಾ ಪೆಹೆಲಾ ವೋಟ್ ದೇಶ್ ಕೇ ಲಿಯೇ' ಕುರಿತು ಉಪನ್ಯಾಸ ಕಾರ್ಯಕ್ರಮ; ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದ ಡಿಟೇಲ್ಸ್‌ ಇಲ್ಲಿದೆ ನೋಡಿ
  Ad Widget   Ad Widget   Ad Widget   Ad Widget   Ad Widget