ಕಾಸರಗೋಡು: ಲೀಸಿಗೆ ಜಾಗ ಕೊಡುವುದಾಗಿ ನಂಬಿಸಿ ಮೋಸ ಮಾಡಿದ ಆರೋಪದಲ್ಲಿ ಸುಳ್ಯದ ವ್ಯಕ್ತಿಯೊಬ್ಬ ಕೇರಳ ಪೊಲೀಸರಿಗೆ ಸಿಕ್ಕಿ ಬಿದ್ದು ಕಂಬಿ ಎಣಿಸುತ್ತಿರುವ ಘಟನೆ ವರದಿಯಾಗಿದೆ. 750 ಎಕರೆ ಜಾಗವನ್ನು ಲೀಸ್ ಗೆ ಮಾಡಿಕೊಡುವುದಾಗಿ ಅನ್ವರ್ ಎಂಬಾತ ನಂಬಿಸಿದ್ದ. ಕೇರಳದ ರಾಜೀವನ್ ಹಾಗೂ ಶ್ರೀಧರನ್ ಎಂಬುವವರಿಂದ ಹಣ ಪಡೆದಿದ್ದ. ನಂತರ ಅನ್ವರ್ ತನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದ. ಆದೂರು ಎಸ್ ಐಟಿ ನಾರ್ ಕೋರ್ಟ್ ಪೊಲೀಸರು ಅನ್ವರ್ ಸುಳ್ಯದಲ್ಲಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.