Latestಕರಾವಳಿಕ್ರೈಂದಕ್ಷಿಣ ಕನ್ನಡಪುತ್ತೂರುರಾಜ್ಯವೈರಲ್ ನ್ಯೂಸ್ಸುಳ್ಯ

ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಪುತ್ತೂರು, ಸುಳ್ಯ, ವಿಟ್ಲ ಸೇರಿದಂತೆ ದ.ಕನ್ನಡ ಜಿಲ್ಲೆಯಾದ್ಯಂತ ಬಂದ್, ಪಂಜದಲ್ಲಿ ಟೈರ್ ಗೆ ಬೆಂಕಿ ಹಾಕಿ ಆಕ್ರೋಶ, ಪುತ್ತೂರಿನಲ್ಲಿ ಅಂಗಡಿ ಬಂದ್ ಮಾಡದವರ ವಿರುದ್ಧ ತಿರುಗಿದ ಆಕ್ರೋಶ

630

ನ್ಯೂಸ್ ನಾಟೌಟ್: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ದಕ್ಷಿಣ ಕನ್ನಡದಾದ್ಯಂತ ಹಲವು ಕಡೆ ಹಿಂದೂ ಪರ ಸಂಘಟನೆಗಳು ಬಂದ್ ಗೆ ನೀಡಿದ ಕರೆ ಯಶಸ್ವಿಯಾಗಿದೆ.

ಪುತ್ತೂರಿನಲ್ಲಿ ಪೇಟೆ ಸಂಪೂರ್ಣ ಬಂದ್ ಗೊಂಡಿತ್ತು. ವಿಟ್ಲದಲ್ಲೂ ಅಂಗಡಿ ಮುಂಗಟ್ಟು ಬಂದ್ ಆಗಿವೆ. ಕಡಬ ಹಾಗೂ ಪಂಜದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸುಹಾಸ್ ಶೆಟ್ಟಿ ಹತ್ಯೆ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷದ್ ಬಂದ್ ಗೆ ಕರೆ ನೀಡಿದರೂ ಶುಕ್ರವಾರ ಪುತ್ತೂರಿನಲ್ಲಿ ಕೆಲವು ಅಂಗಡಿಗಳು ಬಂದ್‍ ಮಾಡದ ಕಾರಣ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳು, ಪುತ್ತೂರು ಬಸ್ ನಿಲ್ದಾಣ ಬಳಿ ಜಮಾಯಿಸಿದ ಘಟನೆ ನಡೆದಿದೆ. 11 ಗಂಟೆ ಸುಮಾರಿಗೆ ಅರುಣ್ ಕುಮಾರ್ ಪುತ್ತಿಲ ಅವರು ಪೊಲೀಸರ ಜೊತೆ ಮಾತನಾಡಿ, ಅಂಗಡಿಗಳನ್ನು ಬಂದ್ ಮಾಡಿಸಿ, ಹಾಗೊಂದು ವೇಳೆ ಬಂದ್ ಮಾಡದೇ ಇದ್ದರೆ ಸವಾಲು ಎದುರಿಸಲು ಸಿದ್ಧ ಎಂದರು.

 

See also  ಗುತ್ತಿಗಾರು: ಕಣ್ಣಿನ ಉಚಿತ ತಪಾಸಣೆ ಮತ್ತು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ, ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಇತರ ಸಂಘ ಸಂಸ್ಥೆಗಳ ಸಹಯೋಗ
  Ad Widget   Ad Widget   Ad Widget   Ad Widget