ಕರಾವಳಿ

ಸುಬ್ರಹ್ಮಣ್ಯ: ಬಾರೀ ಮಳೆ, ಕೊಲ್ಲಮೊಗ್ರು ಸೇತುವೆ ಜಲಾವೃತ, ಪರದಾಡಿದ ವಾಹನ ಸವಾರರು

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಪರಿಸರದಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಬಾರೀ ಮಳೆಯಾಗಿದೆ. ಸುಳ್ಯ ತಾಲೂಕಿನ ಕೊಲ್ಲಮೊಗ್ರು ಪರಿಸರದಲ್ಲಿ ಬಾರೀ ಮಳೆಗೆ ಕೊಲ್ಲಮೊಗ್ರು ಕಲ್ಮಕಾರು ರಸ್ತೆಯ ಶಾಲಾ ಬಳಿ ಇರುವ ಸೇತುವೆ ಜಲಾವೃತಗೊಂಡಿತು. ರಸ್ತೆಯಲ್ಲಿ ಕೂಡ ಮಳೆ ನೀರು ಹರಿದಿದೆ. ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಕೆಲ ಹೊತ್ತು ವಾಹಗಳು ರಸ್ತೆಯಲ್ಲೇ ಬಾಕಿಯಾದ ಘಟನೆಯೂ ನಡೆದಿದೆ. ಸುಬ್ರಹ್ಮಣ್ಯ, ಹರಿಹರ, ಐನೆಕಿದು, ಕೊಲ್ಲಮೊಗ್ರು, ಕಲ್ಮಕಾರು, ಪಂಜ, ಯೇನೆಕಲ್ಲು, ಬಳ್ಪ, ಕುಲ್ಕುಂದ, ಬಿಳಿನೆಲೆ, ಕಲ್ಲುಗುಡ್ಡೆ, ಇಚ್ಲಂಪಾಡಿ, ಕೊಣಾಜೆ ಪರಿಸರದಲ್ಲಿಯೂ  ಗುಡುಗು ಸಹಿತ ಬಾರೀ ಮಳೆ ಸುರಿದಿದೆ. ರಾತ್ರಿಯೂ ಗುಡುಗು ಸಹಿತ ಬಾರ ಮಳೆಯಾಗಿದೆ.

Related posts

ಉಡುಪಿ: ಮಾಜಿ ಕಾಂಗ್ರೆಸ್ ಶಾಸಕ ಯು.ಆರ್. ಸಭಾಪತಿ ಇನ್ನಿಲ್ಲ!

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕಲೋತ್ಸವ..! ರಂಗುರಂಗಿನ ಉಡುಪಿನಲ್ಲಿ ಮಿಂಚಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು..!

ಮಾಜಿ ಬಿಗ್‌ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ದಾಂಪತ್ಯದಲ್ಲಿ ಕಲಹ..! ಹೊಡೆದಾಡಿಕೊಂಡ ಜೋಡಿ, ಪೊಲೀಸರ ಮಧ್ಯ ಪ್ರವೇಶ..!