ಅರಂತೋಡು : ಸುಳ್ಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡತೋಟ ವಲಯದ ದುಗಲಡ್ಕ ಕಾರ್ಯಕ್ಷೇತ್ರದ ಸದಸ್ಯರಿಗೆ ಲಾಭಾಂಶ ವಿತರಣೆ ಕಾರ್ಯಕ್ರಮ ಪೈಚಾರು ಸೇವಾ ಕೇಂದ್ರದಲ್ಲಿ ನಡೆಯಿತು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಯತೀಶ್ ರೈ ಹಾಗೂ ನಗರ ಪಂಚಾಯತ್ ಸದಸ್ಯರಾದ ಶಶಿಕಲ ರವರು ದೀಪ ಬೆಳಗಿಸಿ ಲಾಭಾಂಶವನ್ನು ಸದಸ್ಯರಿಗೆ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ತಾಲ್ಲೂಕಿನ ಆಂತರಿಕ ಲೆಕ್ಕ ಪರಿಶೋಧಕರಾದ ಉಮೇಶ್ ಬಿ ಒಕ್ಕೂಟ ಪದಾಧಿಕಾರಿಗಳು ಮತ್ತು ದುಗಲಡ್ಕ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಚಂದ್ರ ಪ್ರಕಾಶ್ ಪಿ ಹಾಗೂ ನಗದು ಸಹಾಯಕರಾದ ಗಾಯತ್ರಿ ಸುವಿಧಾ ಸಹಾಯಕಿ ಸ್ವರೂಪ ರವರು ಉಪಸ್ಥಿತರಿದ್ದರು
previous post
next post