ಕೊಡಗು

ಸಂಪಾಜೆ ಚೆಕ್‌ ಪೋಸ್ಟ್‌ಗೆ ಉಪ ವಿಭಾಗಾಧಿಕಾರಿ ದಿಢೀರ್‌ ಭೇಟಿ

28

ಸಂಪಾಜೆ: ಕೊಡಗು ಸಂಪಾಜೆಯಲ್ಲಿರುವ ಚೆಕ್‌ಪೋಸ್ಟ್‌ಗೆ ಇಂದು ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್‌ ಖಂಡು ದಿಢೀರ್‌ ಭೇಟಿ ನೀಡಿದ್ದಾರೆ. ಕೇರಳದಲ್ಲಿ ಕರೋನಾ ಮತ್ತು ನಿಫಾ ವೈರಸ್‌ ಕಾಡುತ್ತಿರುವುದರಿಂದ ಗಡಿ ಜಿಲ್ಲೆ ಕೊಡಗಿನಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭೇಟಿಯ ವೇಳೆ ಅವರು ಕಂದಾಯ ಪರಿವೀಕ್ಷಕರು ಮತ್ತು ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಕೇರಳದಿಂದ ಬರುವ ವಾಹನಗಳ ಮೇಲೆ ನಿಗಾವಹಿಸುವಂತೆ ಸೂಚನೆ ನೀಡಿದರು.