ದೇಶ-ಪ್ರಪಂಚ

ಈ ಪ್ರಳಯಾಂತಕನಿಗೆ ಗಾಳ ಹಾಕುತ್ತಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ!

ಅಗರ್ತಲಾ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಕೆಳಕ್ಕಿಳಿಸಿ ಮತ್ತೆ ಅಧಿಕಾರಕ್ಕೆ ಏರುವುದಕ್ಕೆ ಕಾಂಗ್ರೆಸ್ ಈಗಿನಿಂದಲೇ ತಾಲೀಮು ಶುರು ಮಾಡಿದೆ. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆ ಮಾಡುವುದು, ಅದನ್ನು ಬಲ ಪಡಿಸುವುದಕ್ಕೆ ಪೂರ್ಣ ತಯಾರಿ ಮಾಡಲಾಗುತ್ತಿದೆ.ಇಂತಹ ಸಂದರ್ಭದಲ್ಲಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಇವರ ಆಗಮನದಿಂದ ಪಕ್ಷಕ್ಕೆಎಷ್ಟು ಪ್ರಯೋಜನವಾಗಬಹುದು ಎನ್ನುವುದರ ಕುರಿತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಾಗಿದೆ. ಈ ಹಿಂದೆ ಪ್ರಶಾಂತ್ ಕಿಶೋರ್ ತಾನು ಯಾವುದೇ ರಾಜಕೀಯ ಪಕ್ಷಗಳ ಪರ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದರು. ವಿವಿಧ ರಾಜಕೀಯ ಪಕ್ಷಗಳು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಇನ್ನಿಲ್ಲದ ಕಸರತ್ತು ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಅವರು ಇಂತಹ ಹೇಳಿಕೆಯನ್ನು ನೀಡಿದ್ದರು.

Related posts

ಭಾರತ ನಿಜವಾದ “ದೋಸ್ತ್” ಎಂದ ಟರ್ಕಿ – ಭೂಕಂಪ ಪೀಡಿತ ಟರ್ಕಿಗೆ ಭಾರತದ ಅಭಯ

2 ಮಹಿಳಾ ನಕ್ಸಲರು ಸೇರಿದಂತೆ ಎನ್ ​ಕೌಂಟರ್ ​ನಲ್ಲಿ 12 ನಕ್ಸಲರ ಹತ್ಯೆ..! ಆಟೋ-ಲೋಡಿಂಗ್ ರೈಫಲ್ ಸೇರಿದಂತೆ ದೊಡ್ಡ ಪ್ರಮಾಣದ ಬಂದೂಕುಗಳು, ಮದ್ದುಗುಂಡುಗಳು ವಶಕ್ಕೆ..!

5 ವರ್ಷಗಳ ಬಳಿಕ ಅಟ್ಲಾಂಟಿಕ್ ಸಾಗರದಲ್ಲಿ ಪತನಗೊಂಡದ್ದೇಕೆ ಆ ಉಪಗ್ರಹ? 200 ಮೈಲುಗಳಷ್ಟು ಎತ್ತರದಿಂದ ಬೀಳಲು ಕಾರಣವೇನು?