ತಿರುವನಂತಪುರ :ಕಳ್ಳತನ ಮಾಡಿದವ ಪೊಲೀಸ್ ಕೈಗೆ ಸಿಕ್ಕಿ ಬೀಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿಯೇ ಹೆಣದ ಕಿಸೆಯಲ್ಲಿದ್ದ ಮೊಬೈಲ್ ಕದ್ದು ದೊಡ್ಡ ಸುದ್ದಿಯಾಗಿದ್ದಾನೆ. ಎಸ್ಐ ಸತ್ತು ಹೋದ ವ್ಯಕ್ತಿಯ ಬಳಿಯು ತನ್ನ ಕಳ್ಳ ಬುದ್ಧಿ ತೋರಿರುವುದು ಅಮಾನವೀಯ ಅನ್ನುವ ಟೀಕೆ ಕೇಳಿ ಬಂದಿದೆ. ಪೆರುಮಥುರಾ ಮೂಲದ ವ್ಯಕ್ತಿಯೊಬ್ಬ ಕನಿಯಾಪುರಂ ರೈಲ್ವೆ ನಿಲ್ದಾಣದ ಬಳಿ ಮೃತಪಟ್ಟಿದ್ದ. ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿದ ಎಸ್ಐ ಜ್ಯೋತಿ ಸುಧಾಕರ್ ಎಲ್ಲ ಪ್ರಕ್ರಿಯೆಯನ್ನು ಮುಗಿಸಿದ್ದರು. ಈ ಪ್ರಕ್ರಿಯೆ ವೇಳೆ ಎಸ್ಐ ಮೊಬೈಲ್ ಕಳ್ಳತನ ಮಾಡಿದ್ದಾರೆಂದು ತಿಳಿದುಬಂದಿದೆ. ಸದ್ಯ ಎಸ್ಐ ಅನ್ನು ಅಮಾನತು ಮಾಡಲಾಗಿದೆ.